Advertisement

ಕೆಆರ್‌ಎಸ್‌ ಬಗ್ಗೆ ಮಾತನಾಡುವಾಗ ಸುಮಲತಾಗೆ ಎಚ್ಚರವಿರಲಿ: ಸಾರಾ

06:25 PM Jul 10, 2021 | Team Udayavani |

ಮೈಸೂರು: ಸಂಸದೆ ಸುಮಲತಾ ಅಂಬರೀಶ್‌ ಅವರ ಬಗ್ಗೆಮಾತನಾಡುವಷ್ಟು ಯೋಗ್ಯತೆ ನಮಗಾಗಲಿ, ನಮ್ಮ ಪಕ್ಷದವರಿಗಾಗಲಿ ಇಲ್ಲ ಎಂದು ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ವ್ಯಂಗ್ಯವಾಡಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆಮಾತನಾಡಿದ ಅವರು, ಅಂಬರೀಶ್‌ ಅಣ್ಣನವರಧರ್ಮಪತ್ನಿ, ನಮ್ಮ ಕ್ಷೇತ್ರದ ಸಂಸದೆ. ಕೋವಿಡ್‌ಆರಂಭವಾದ ನಂತರ ನನ್ನ ಕ್ಷೇತ್ರವು ಸೇರಿ ಎಲ್ಲಗ್ರಾಮಕ್ಕೂ ಭೇಟಿ ಕೊಟ್ಟು ಕೆಲಸ ಮಾಡುವ ಮೂಲಕಅವರು ಬ್ಯುಸಿಯಾಗಿದ್ದಾರೆ. ಅದಕ್ಕಾಗಿ ಅವರ ಅವರ ಬಗ್ಗೆ ಮಾತನಾಡಬೇಡಿ ಎಂದುಕುಮಾರಣ್ಣನಲ್ಲಿ ಮನವಿ ಮಾಡಿದ್ದೇನೆ ಎಂದರು.

ಕೆಆರ್‌ಎಸ್‌ ಬಿರುಕುಬಿಟ್ಟಿದೆ ಎಂದು ಮಾಹಿತಿ ನೀಡಿದಾಗ ಸುಮಲತಾ ಅವರು ಒಮ್ಮೆ ಹೋಗಿಅದನ್ನು ಪರಶೀಲನೆ ಮಾಡಬೇಕಿತ್ತು. ಯಾರೋ ಮಾತು ಕೇಳಿ ಮಾತನಾಡಿದ್ದಾರೆ. ಕನ್ನಂಬಾಡಿ ಕೇವಲ ಕಟ್ಟೆ ಅಲ್ಲ, ಅದು ಮೈಸೂರು, ಮಂಡ್ಯ ಜಿÇÉೆಜೀವನಾಡಿ.ಅದರೊಂದಿಗೆಭಾವನಾತ್ಮಕಸಂಬಂಧವಿದೆ.ಹೀಗಾಗಿ,ಈ ಕುರಿತುಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next