Advertisement

ಸಿದ್ದರಾಮಯ್ಯ ಮನೆ ಮುಂದೆ ಅರ್ಜಿ ಹಿಡಿದು ನಿಂತಿಲ್ಲ: ಸಚಿವ

07:27 PM Jul 08, 2021 | Team Udayavani |

ಮೈಸೂರು: ಕಾಂಗ್ರೆಸ್‌ ತೊರೆದು ಬಂದ 17 ಮಂದಿಯಲ್ಲಿ ಯಾರೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನಮನೆ ಮುಂದೆ ಅರ್ಜಿ ಹಿಡಿದು ನಿಂತಿಲ್ಲ ಎಂದು ಸಚಿವಎಸ್‌.ಟಿ. ಸೋಮಶೇಖರ್‌ ತಿಳಿಸಿದರು.

Advertisement

17 ಜನರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಮಾತೇಇಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆಪ್ರತಿಕ್ರಿಯಿಸಿದ ಸಚಿವರು, ನಾವ್ಯಾರೂ ಕಾಂಗ್ರೆಸ್‌ ಪಕ್ಷಸೇರಬೇಕೆಂದು ಅರ್ಜಿ ಹಾಕಿಲ್ಲ,

ಅವರ ಮನೆಬಾಗಿಲಿಗೂ ಹೋಗಿಲ್ಲ. ಸಿದ್ದರಾಮಯ್ಯ ಅವರೇಅಧಿಕಾರಕ್ಕಾಗಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ಗೆಹೋದವರು ಎಂದು ಲೇವಡಿ ಮಾಡಿದರು.ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯಮತ್ತುಶಿವಕುಮಾರ್‌ನಡುವೆ ಹೊಂದಾಣಿಕೆಯೇಇಲ್ಲ. ಜನರ ಗಮನವನ್ನುಬೇರೆಡೆ ಸೆಳೆಯಲು ಈ ರೀತಿÊ ‌Þತನಾ ಡುತಿ ¤ದ್ದಾರೆ.

ನಮ್ಮನ್ನು ಪಕ್ಷ ಮತ್ತು ಸರ್ಕಾರಗೌರ ವಯುñ ‌ವಾಗಿನಡೆಸಿಕೊಳ್ಳುತ್ತಿದೆ. ಆದ್ದರಿಂದನಾವು ಎಲ್ಲಿಯೂ ಹೋಗುವಪ್ರಶ್ನೆಯೇ ಇಲ್ಲ ಎಂದರು.ಬಿಜೆಪಿ ಶಾಸಕ ಯತ್ನಾಳ್‌ ಹೇಳಿಕೆಗೆ ಪ್ರತಿಕ್ರಿಯಿಸಿದಅವರು, ನಾನು ಎಂದಿಗೂ ಡಬಲ್‌ ಗೇಮ್‌ರಾಜಕಾರಣ ಮಾಡಿಲ್ಲ,

ಮಾಡುವುದೂ ಇಲ್ಲ.ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದವರುಯಡಿಯೂರಪ್ಪ. ರಾಜ್ಯದಲ್ಲಿ ಬಿಜೆಪಿಗೆ ಕೇವಲ 2-3ಸ್ಥಾನಗಳು ದೊರೆಯುತ್ತಿದ್ದಾಗಿನಿಂದ ಬೀದಿಯಲ್ಲಿನಿಂತು, ಹೋರಾಟ ಮಾಡಿ ಪಕ್ಷ ಕಟ್ಟಿದ ಅವರನ್ನುನಾವೆಲ್ಲರೂ ಗೌರವಯುತವಾಗಿ ನಡೆಸಿಕೊಳ್ಳಬೇಕು.ಹಾದಿ, ಬೀದಿಯಲ್ಲಿ ಮಾತನಾಡುವುದು ಸರಿಯಲ್ಲಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದುತಿಳಿಸಿದರು

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next