Advertisement

ಮೈಸೂರು: ಎರಡು ಗುಂಪುಗಳ ನಡುವೆ ಮಾರಾಮಾರಿ : ಓರ್ವ ಯುವಕನ ಕೊಲೆ

09:33 PM Oct 10, 2021 | Team Udayavani |

ಮೈಸೂರು: ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಯುವಕನ ಕೊಲೆ ಮಾಡಿರುವ ಘಟನೆ ನಗರದ ಗುಂಡೂರಾವ್ ನಗರದ ಖಾಲಿ ಜಾಗವೊಂದರಲ್ಲಿ ನಡೆದಿದೆ.

Advertisement

ಇಬ್ಬರು ಯುವಕರ ಮೇಲೆ ಮಾರಕಾಸ್ತ್ರಗಳಿಂದ ಎಂಟತ್ತು ಮಂದಿಯ ತಂಡದಿಂದ ದಾಳಿ ನಡೆದಿದ್ದು, ನಂದ ಕಿಶೋರ್ (24) ಹೆಸರಿನ ಯುವಕ ಕೊಲೆಯಾಗಿದ್ದಾನೆ. ಗಾಯಗೊಂಡ ಮತ್ತೊಬ್ಬ ಯುವಕ ಸಂಜಯ್ (25)  ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ದಾಳಿ ವೇಳೆ ನಂದ ಕಿಶೋರ್‌ನಿಗೆ ಚಾಕುವಿನಿಂದ ಮನಬಂದಂತೆ ಇರಿಯಲಾಗಿದೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ವಿದ್ಯಾರಣ್ಯಪುರಂ ಪೊಲೀಸರು, ಕೊಲೆ ಮಾಡಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next