Advertisement

ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಕಾರು: ಇಬ್ಬರು ವಕೀಲರು ಸ್ಥಳದಲ್ಲೇ ಸಾವು, ಇನ್ನೋರ್ವ ಪಾರು

08:20 PM Jul 29, 2022 | Team Udayavani |

ಮೈಸೂರು : ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಕಬಿನಿ ಬಲದಂಡೆ ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಇಬ್ಬರು ವಕೀಲರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಾಗರಿ ಗ್ರಾಮದ ಬಳಿ ನಡೆದಿದೆ.
ಹುಣಸೂರು ತಾಲೂಕು ನಿಲುವಾಗಿಲು ಗ್ರಾಮದ ಗಿರೀಶ್ ಹಾಗೂ ಹುಂಡುವಾಡಿ ಗ್ರಾಮದ ಸಿ.ದಿನೇಶ್ ಮೃತ ದುರ್ದೈವಿಗಳು.

Advertisement

ಘಟನೆ ವಿವರ : ಹುಣಸೂರಿನ ಮೂವರು ವಕೀಲರಾದ ಅಶೋಕ, ದಿನೇಶ್, ಶಂಕರ್ ಕಾರಿನಲ್ಲಿ ಸರಗೂರು ತಾಲೂಕಿನ ಚಿಕ್ಕದೇವಮ್ಮನ ಬೆಟ್ಟಕ್ಕೆ ಬಳಿಕ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿಂದ ಕಬಿನಿ ಜಲಾಶಯಕ್ಕೆ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಸಾಗರಿ ಗ್ರಾಮದ ಬಳಿ ಇರುವ ಕಬಿನಿ ಬಲದಂಡೆ ಕಾಲುವೆಗೆ ಬಿದ್ದಿದೆ. ಈ ಸಂದರ್ಭ ಅಶೋಕ್ ( 44) ಎಂಬುವವರು ಈಜಿ ದಡ ಸೇರಿದ್ದರೆ, ಗಿರೀಶ್ ಹಾಗು ದಿನೇಶ್ ಕಾರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಬಂದ ಪೊಲೀಸರು ಮತ್ತು ಅಗ್ನಿಶಾಮಕ ಠಾಣೆ ಸಿಬ್ಬಂದಿ ಕಾರು ಸಮೇತ ಮುಳುಗಿದ್ದ ಇಬ್ಬರ ಮೃತ ದೇಹವನ್ನು ಹೊರ ತೆಗೆದಿದ್ದಾರೆ.

ಇದನ್ನೂ ಓದಿ : ಕುಪ್ವಾರದಲ್ಲಿ ಶಸ್ತ್ರಾಸ್ತ್ರ ಸಹಿತ ಇಬ್ಬರು ಹೈಬ್ರಿಡ್ ಉಗ್ರರ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next