ಹುಣಸೂರು ತಾಲೂಕು ನಿಲುವಾಗಿಲು ಗ್ರಾಮದ ಗಿರೀಶ್ ಹಾಗೂ ಹುಂಡುವಾಡಿ ಗ್ರಾಮದ ಸಿ.ದಿನೇಶ್ ಮೃತ ದುರ್ದೈವಿಗಳು.
Advertisement
ಘಟನೆ ವಿವರ : ಹುಣಸೂರಿನ ಮೂವರು ವಕೀಲರಾದ ಅಶೋಕ, ದಿನೇಶ್, ಶಂಕರ್ ಕಾರಿನಲ್ಲಿ ಸರಗೂರು ತಾಲೂಕಿನ ಚಿಕ್ಕದೇವಮ್ಮನ ಬೆಟ್ಟಕ್ಕೆ ಬಳಿಕ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿಂದ ಕಬಿನಿ ಜಲಾಶಯಕ್ಕೆ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಸಾಗರಿ ಗ್ರಾಮದ ಬಳಿ ಇರುವ ಕಬಿನಿ ಬಲದಂಡೆ ಕಾಲುವೆಗೆ ಬಿದ್ದಿದೆ. ಈ ಸಂದರ್ಭ ಅಶೋಕ್ ( 44) ಎಂಬುವವರು ಈಜಿ ದಡ ಸೇರಿದ್ದರೆ, ಗಿರೀಶ್ ಹಾಗು ದಿನೇಶ್ ಕಾರಿನಲ್ಲಿ ಸಿಲುಕಿ ಮೃತಪಟ್ಟಿದ್ದಾರೆ.