Advertisement

ಮೈಸೂರು : ಕುಡಿತ ಮತ್ತಿನಲ್ಲಿ ಬಾರ್ ವೇಟರ್ ನನ್ನೇ ಚಾಕುವಿನಿಂದ ಇರಿದು ಕೊಲೆಗೈದ ಯುವಕ

11:46 PM Jul 20, 2022 | Team Udayavani |

ಮೈಸೂರು : ಕುಡಿತ ಮತ್ತಿನಲ್ಲಿ ಯುವಕನೋಬ್ಬ ಬಾರ್ ವೇಟರ್ ನನ್ನೇ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ನಾಚನಹಳ್ಳಿ ಪಾಳ್ಯದ ಮಾನಂದವಾಡಿ ರಸ್ತೆಯಲ್ಲಿರುವ ಬಾರ್‌ನಲ್ಲಿ ಬುಧವಾರ ರಾತ್ರಿ ನಡೆದಿದೆ.

Advertisement

ವೇಟರ್‌ 25– 30ರ ವಯಸ್ಸಿನವರಾಗಿದ್ದು, ಹೆಸರು ತಿಳಿದು ಬಂದಿಲ್ಲ.

ಬಾರ್‌ಗೆ ಬಂದ ಗ್ರಾಹಕ ಹಾಗೂ ವೇಟರ್‌ನ ನಡುವೆ ಮಾತಿಗೆ ಮಾತು ಬೆಳೆದಿದೆ. ಗ್ರಾಹಕ ವೇಟರ್‌ ನಿಗೆ ಚಾಕುವಿನಿಂದ ಇರಿದಿದ್ದಾನೆ ಪರಿಣಾಮ ರಕ್ತಸ್ರಾವವಾಗಿ ವೇಟರ್ ಸ್ಥಳದಲ್ಲೇ ಬಿದ್ದು ಮೃತ‍ಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತು ವಿದ್ಯಾರಣ್ಯಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ : ನಿಷೇಧಿತ ದ್ರವ್ಯ ಸೇವಿಸಿ ಸಿಕ್ಕಿಬಿದ್ದರು; ತಂಡದಿಂದ ಹೊರಬಿದ್ದ ಧನಲಕ್ಷ್ಮೀ, ಐಶ್ವರ್ಯಾ

Advertisement
Advertisement

Udayavani is now on Telegram. Click here to join our channel and stay updated with the latest news.

Next