Advertisement

ಟಿಎಂಸಿ ಸರಕಾರದಿಂದ ಫೋನ್‌ ಟ್ಯಾಪಿಂಗ್‌: ಬಿಜೆಪಿ ನಾಯಕರ ಆರೋಪ

03:56 PM Oct 10, 2018 | Team Udayavani |

ಕೋಲ್ಕತ : ಪಶ್ಚಿಮ ಬಂಗಾಲದಲ್ಲಿನ ತೃಣಮೂಲ ಸರಕಾರ ನನ್ನ ಫೋನ್‌ ಟ್ಯಾಪ್‌ ಮಾಡುತ್ತಿದೆ (ಕದ್ದಾಲಿಸುತ್ತಿದೆ) ಎಂದು ಬಿಜೆಪಿ ನಾಯಕ ಮುಕುಲ್‌ ರಾಯ್‌ ಆರೋಪಿಸಿದ್ದಾರೆ.

Advertisement

ಪಕ್ಷದ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗೀಯ ಅವರೊಂದಿಗೆ ನಾನು ನಡೆಸಿದ ಫೋನ್‌ ಸಂಭಾಷಣೆಯ ಎರಡು ಆಡಿಯೋ ಕ್ಲಿಪ್‌ ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಮುಕುಲ್‌ ರಾಯ್‌ ಹೇಳಿದ್ದಾರೆ. 

ಇದೇ ವೇಳೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್‌ ಘೋಷ್‌ ಅವರು ರಾಜ್ಯದಲ್ಲಿನ ಬಿಜೆಪಿ ನಾಯಕರ ಟೆಲಿಪೋನ್‌ಗಳನ್ನು ಪಶ್ಚಿಮ ಬಂಗಾಲ ಪೊಲೀಸರು ಅಕ್ರಮವಾಗಿ ಕದ್ದಾಲಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next