Advertisement

ನನ್ನ ತಂದೆ ರಾಷ್ಟ್ರೀಯವಾದಿ : ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ತಿರುಗೇಟು

02:01 PM Oct 15, 2021 | Team Udayavani |

ಬೆಂಗಳೂರು : ಸೈದ್ಧಾಂತಿಕ ವಿಚಾರಗಳಿಗಾಗಿ ಮಾಜಿ ಮುಖ್ಯಮತ್ರಿ ಮತ್ತು ಹಾಲಿ ಮುಖ್ಯಮತ್ರಿಗಳು ಟ್ವೀಟ್ ಗಳ ಮೂಲಕ ಸಮರ ಮುಂದುವರೆಸಿದ್ದು, ನನ್ನ ತಂದೆ ರಾಷ್ಟ್ರೀಯ ವಾದಿ, ಅದನ್ನು ನಾನು ಪಾಲಿಸುತ್ತೇನೆ. ಆರ್ ಎಸ್ ಎಸ್ ಕೂಡ ರಾಷ್ಟ್ರೀಯತೆಯನ್ನೇ ಪ್ರತಿಪಾದಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಾಜಿ ಮುಖ್ಯಮತ್ರಿ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.

Advertisement

ಟ್ವೀಟ್ ಗೆ ಟ್ವೀಟ್ ಮೂಲಕವೇ ಉತ್ತರ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ನನ್ನ ತಂದೆ ನನಗೆ ಸಾರ್ವಜನಿಕ ಜೀವನದಲ್ಲಿ ಯಾವುದು ಉತ್ತಮ ಎಂಬುದನ್ನು ಕಲಿಸಿದ್ದಾರೆ. ಇದೇ ರೀತಿಯ ಮಾರ್ಗದರ್ಶನವನ್ನು ಅವರು ನಿಮಗೂ ಮಾಡಿರಬಹುದು ಎಂಬುದು ನನ್ನ ಭಾವನೆ. ನನ್ನ ತಂದೆ ರಾಷ್ಟ್ರೀಯ ವಾದಿ, ಅದನ್ನು ನಾನು ಪಾಲಿಸುತ್ತೇನೆ. ಆರ್ ಎಸ್ಎಸ್ ಕೂಡ ರಾಷ್ಟ್ರೀಯತೆಯನ್ನೇ ಪ್ರತಿಪಾದಿಸುತ್ತದೆ. ಅದೇನೆ ಇರಲಿ ಸಿದ್ದರಾಮಯ್ಯ ಅವರೇ, ನೀವು ಜೀವನ ಪರ್ಯಂತ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುತ್ತ ಬಂದಿದ್ದೀರಿ. ಈಗ ಒಂದು ಕುಟುಂಬದ ಹಿನ್ನೆಲೆ ಗಾಯಕರಾಗಿದ್ದೀರಿ, ಎಂದು ಕುಟುಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next