Advertisement

ಸರಕಾರಿ ಹುದ್ದೆಗಾಗಿ ಸಹಿಷ್ಣುಗಳ ಮುಖವಾಡ: ಸಚಿವ ಸತ್ಯಪಾಲ್‌ ಸಿಂಗ್‌ ಬಘೇಲ್‌

11:59 PM May 09, 2023 | Team Udayavani |

ಹೊಸದಿಲ್ಲಿ: ದೇಶದಲ್ಲಿ ಬೆರಳೆಣಿಕೆಯ ಮುಸ್ಲಿ ಮರು ಮಾತ್ರ ಸಹಿಷ್ಣುಗಳಾಗಿದ್ದಾರೆ. ಅವರೂ ಉಪ-ರಾಷ್ಟ್ರಪತಿ, ಕುಲಪತಿ, ರಾಜ್ಯಪಾಲರು ಗಳಂಥ ಸ್ಥಾನಕ್ಕಾಗಿ ಈ ರೀತಿ ಸಹಿಷ್ಣುಗಳ ಮುಖ ವಾಡ ತೊಟ್ಟಿರುತ್ತಾರೆ ಎಂದು ಕೇಂದ್ರ ಸಚಿವ ಸತ್ಯಪಾಲ್‌ ಸಿಂಗ್‌ ಬಘೇಲ್‌ ಹೇಳಿಕೆ ನೀಡಿದ್ದು, ಇದೀಗ ತೀವ್ರ ವಿವಾದಕ್ಕೆ ಗ್ರಾಸವಾಗಿದೆ. ಕೇಂದ್ರ ಕಾನೂನು ಖಾತೆ ಸಹಾಯಕ ಸಚಿವ ಬಘೇಲ್‌, ಆರ್‌ಎಸ್‌ಎಸ್‌ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು.

Advertisement

ಈ ವೇಳೆ ಸಮಾಜದಲ್ಲಿ ಹಿಂದೂ-ಮುಸ್ಲಿಂ ಸೌಹಾರ್ದತೆ ಕುರಿತು ಮಾತನಾಡುತ್ತಾ, ನಮ್ಮ ಸುತ್ತಲಿನ ಮುಸ್ಲಿಮರಲ್ಲಿ ಸಹಿಷ್ಣುಗಳ ಸಂಖ್ಯೆ ಕಡಿಮೆ. ಅದರಲ್ಲೂ ಬಹುತೇಕರು ಸರ್ಕಾರಿ ಹುದ್ದೆಗಳಿಗಾಗಿ, ಸ್ಥಾನಗಳಿಗಾಗಿ ಸಹಿಷ್ಣುಗಳಂತೆ ನಟಿಸುತ್ತಾರೆ. ಅವರ ನಿವೃತ್ತಿಯ ಬಳಿಕ ನಿಜವಾದ ಮನಸ್ಥಿತಿ ಹೊರಬಂದು, ಹೇಳಿಕೆಗಳು ಹೊರಬೀಳುತ್ತವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next