Advertisement

ದೇಶಾದ್ಯಂತ ಮುಸ್ಲಿಮರ ಪ್ರತಿಭಟನೆ: ಸಿ.ಟಿ.ರವಿ ತೀವ್ರ ವಿರೋಧ

10:10 PM Jun 10, 2022 | Team Udayavani |

ಬೆಂಗಳೂರು: 15 ದಿನಗಳ ಹಿಂದೆ ಹೇಳಿಕೆ ನೀಡಿರುವ ನೂಪುರ್ ಶರ್ಮಾ ವಿರುದ್ದ ಪ್ರತಿಭಟನೆ ಹಿಂದೆ ಸಂಚು ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವಿರಾರು ಬಾರಿ ಹಿಂದೂ ದೇವರನ್ನು ವಿರೋಧ ಮಾಡಿದ್ದಾರೆ. ಕೆಲವು ಮತಗಳು ಇನ್ನೊಂದು ದೇವರನ್ನೇ ಒಪ್ಪಿಕೊಳ್ಳುವುದಿಲ್ಲ. ಕೆಲವು ಸತ್ಯ ಅಪ್ರಿಯವಾದರೆ ಹೇಳಬಾರದು. ಈ ಆಧಾರದಲ್ಲಿ ಯಾವ ಮತಗಳು ಮನುಕುಲಕ್ಕೆ ವಿರೋಧ ಆಗಿವೆ, ಕ್ರೌರ್ಯ ಆಗಿವೆ ಎಂದು ಚರ್ಚೆ ಮಾಡಲು ಅವಕಾಶ ಇದೆ ಎಂದರು.

ಈ ನೆಲದ ಕಾನೂನು ಎಲ್ಲರಿಗೂ ಅನ್ವಯ.ಹಿಂದೂ ದೇವತೆಗಳಿಗೆ ಅವಮಾನ ಮಾಡಿದವರಿಗೆ ಇದು ಅನ್ವಯ ಆಗಬೇಕು.ಪ್ರಜಾಪ್ರಭುತ್ವ ದಲ್ಲಿ ಜನ ಜಾಗೃತಿ , ಕಾನೂನು ಅಡಿಯಲ್ಲಿ ಕ್ರಮ ಅಷ್ಟೇ ಎಂದು ಹೇಳಿಕೆ ನೀಡಿ ದೇಶಾದ್ಯಂತ ಪ್ರವಾದಿ ವಿರುದ್ಧ ನೀಡಿರುವ ಹೇಳಿಕೆ ಖಂಡಿಸಿ ನಡೆಸಲಾಗುತ್ತಿರುವ ಪ್ರತಿಭಟನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next