Advertisement

ಮುಸ್ಲಿಮರ ಉರುಸ್ ಪೂಜೆಯ ಮರಕ್ಕೆ ಬೆಂಕಿ; ಚಿಕ್ಕಮಗಳೂರಿನಲ್ಲಿ ಬಿಗುವಿನ ವಾತಾವರಣ

01:25 PM Jun 14, 2022 | Team Udayavani |

ಚಿಕ್ಕಮಗಳೂರು: ನಗರ ಸಮೀಪದ ಆದಿಶಕ್ತಿನಗರದಲ್ಲಿ ಮುಸ್ಲಿಂ ಸಮುದಾಯದವರು ವರ್ಷಕ್ಕೊಮ್ಮೆ ನಡೆಯುತಿದ್ದ ಉರುಸ್ ನಲ್ಲಿ ಪೂಜೆ ಸಲ್ಲಿಸುತ್ತಿದ್ದ ಅರಳಿಮರಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

Advertisement

ರಸ್ತೆ ಬದಿಯಲ್ಲಿದ್ದ ದೇವರ ಕಟ್ಟೆಗೆ ಬೆಂಕಿ ಹಾಕಲಾಗಿದ್ದು, ಕುರಾನ್, ಕಿಟ್ಟ, ಪೂಜಾ ಸಾಮಗ್ರಿ ಸೇರಿದಂತೆ ಧ್ವಜಗಳು ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋಗಿವೆ.

ಸೋಮವಾರ ತಡ ರಾತ್ರಿ ದುಷ್ಕರ್ಮಿಗಳು ಬೆಂಕಿ ಹಾಕಿದ್ದು, ಮಸೀದಿಯ ಕೂಗಳತೆ ದೂರದಲ್ಲಿರುವ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next