Advertisement

ಅಯೋಧ್ಯೆ ತೀರ್ಪು: ಮೆಲ್ಮನವಿ ಸಲ್ಲಿಸಲು ನಿರ್ಧರಿಸಿದ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

09:59 AM Nov 18, 2019 | Hari Prasad |

ನವದೆಹಲಿ: ಸುಪ್ರೀಂಕೋರ್ಟ್ ಇತ್ತಿಚೆಗೆ ನೀಡಿದ್ದ ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣದ ತೀರ್ಪಿಗೆ ಸಂಬಂಧಿಸಿದಂತೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪುನರ್ ಪರಿಶೀಲನಾ ಅರ್ಜಿಯನ್ನು ಸಲ್ಲಿಸಲು ತೀರ್ಮಾನಿಸಿದೆ. ಮೌಲಾನ ಅರ್ಷದ್ ಮದನಿ ಅವರು ಇಂದು ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ತೀರ್ಪಿನ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮಸೀದಿ ನಿರ್ಮಾಣಕ್ಕೆಂದು ಕೇಂದ್ರ ಸರಕಾರದ ಮೂಲಕ ನೀಡಲು ಆದೇಶಿಸಿದ್ದ ಐದು ಎಕರೆ ಜಾಗದ ಪ್ರಸ್ತಾಪವನ್ನೂ ಸಹ ವೈಯಕ್ತಿಕ ಕಾನೂನು ಮಂಡಳಿ ತಿರಸ್ಕರಿಸಿದೆ.

Advertisement

ಹಿರಿಯ ವಕೀಲ ರಾಜೀವ್ ಧವನ್ ಅವರೇ ಮುಸ್ಲಿಂ ಪಕ್ಷಗಳ ಪರವಾಗಿ ವಾದ ಮಂಡಿಸಲಿದ್ದಾರೆ. 30 ದಿನಗಳ ಒಳಗಾಗಿ ಅಂದರೆ ಡಿಸೆಂಬರ್ 09ರ ಒಳಗಾಗಿ ಮರುಪರಿಶೀಲನಾ ಅರ್ಜಿ ಸಲ್ಲಿಕೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next