Advertisement

ಕಾಂಗ್ರೆಸ್ ನಾಯಕರ ಹೇಳಿಕೆ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ: ವಿಡಿಯೋ ವೈರಲ್‌

12:27 PM Aug 18, 2022 | Team Udayavani |

ಶಿವಮೊಗ್ಗ: ಕಾಂಗ್ರೆಸ್ ನಾಯಕರ ನಡೆಯ ವಿರುದ್ಧ ಶಿವಮೊಗ್ಗ ಟಿಪ್ಪುನಗರ ಭಾಗದ ಮುಸ್ಲಿಂ ಮುಖಂಡ ನಜರುಲ್ಲಾ ಶೇಕ್ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Advertisement

ನಜರುಲ್ಲಾ ಶೇಕ್ ಮುಸ್ಲಿಂ ಫೇಸ್‌ಬುಕ್‌ ಪೇಜ್ ನಲ್ಲಿ ಬುಧವಾರ ರಾತ್ರಿ ವಿಡಿಯೋವೊಂದನ್ನು ಅಪ್ಲೋಡ್  ಮಾಡಿದ್ದು ಇದೀಗ ವೈರಲ್‌ ಆಗಿದೆ.

ಕಾಂಗ್ರೆಸ್ ಲೀಡರ್ಸ್ ಅನ್ನುವವರು ಬಹಳ ಜನ ಇದ್ದಾರೆ. ಜಿಲ್ಲೆಯಲ್ಲಿ ಬೇಕಾದಷ್ಟು ಜನ ಸಿಗುತ್ತಾರೆ. ಸಿದ್ದರಾಮಯ್ಯ, ಡಿಕೆಶಿ ಅಂತಹ ನಾಯಕರು ಬಂದಾಗ ಕೇವಲ ಫ್ಲೇಕ್ಸ್ ಹಾಕುವುದಕ್ಕಷ್ಟೇ… ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿಗೆ ಎನಾದರೂ ಪೊಲೀಸರು ತೊಂದರೆ ಕೊಟ್ಟರೆ ಹೋರಾಟ ಮಾಡುತ್ತಾರೆ. ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಗೆ ಸಮಸ್ಯೆಯಾದರೂ ಶಿವಮೊಗ್ಗದಲ್ಲಿ ಹೋರಾಟ ಮಾಡುತ್ತಾರೆ. ನಿಮ್ಮ ಪಕ್ಷದ ಕಾರ್ಪೋರೇಟರ್ ಗಂಡನನ್ನು ಜೈಲಿಗೆ ಹಾಕಿದ್ದಾರೆ. ಈಗ ಎಲ್ಲಿದ್ದೀರಾ ಸ್ವಾಮಿ ನೀವು ಕಾಂಗ್ರೆಸ್ ನವರು…? ಬರೀ ವೋಟ್ ಕೇಳುವುದಕ್ಕಷ್ಟೇ ಬರೋದಾ…? ಎಂದು ಆಕ್ರೋಶ ಹೊರಹಾಕಿದ್ದಾರೆ.

ರಾಹುಲ್, ಡಿಕೆಶಿ, ಸಿದ್ದರಾಮಯ್ಯ ಅವರಿಗೆ ತೊಂದರೆ ಆದರೆ ಮಾತ್ರ ಬರೋದಾ..? ಕಾಂಗ್ರೆಸ್ ಕಾರ್ಯಕರ್ತರ ಜೊತೆ ನಾವು ಇದ್ದೀವಿ ಅನ್ನುತ್ತೀರಿ. ಕಾಂಗ್ರೆಸ್ ಪಕ್ಷದ ಕಾರ್ಪೋರೇಟರ್  ಗಂಡನನ್ನೇ ಜೈಲಿಗೆ ಹಾಕಿದ್ದಾರೆ. ಇಲ್ಲಿಗೆ ಯಾವ ಕಾಂಗ್ರೆಸ್ ನಾಯಕನೂ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಸಿದ್ದರಾಮಯ್ಯಗೆ ಸಾವರ್ಕರ್ ಭಾವಚಿತ್ರ ನೀಡಿ, ಕಪ್ಪು ಬಾವುಟದ ಸ್ವಾಗತ

Advertisement

ಟಿಪ್ಪುನಗರಕ್ಕೆ ವೋಟ್ ಕೇಳಲು ಬರಲು ನೀವು ಯೋಚನೆ ಮಾಡಬೇಕು. ನಿಮ್ಮ ಯೋಗ್ಯತೆ ಏನು ಎಂದು ನೀವು ಯೋಚನೆ ಮಾಡಿ…. ಕಾರ್ಪೋರೇಟರ್ ಗಂಡನನ್ನೇ ಕಾಪಾಡಲಿಲ್ಲ. ಜನರನ್ನು ಹೇಗೆ ಕಾಪಾಡುತ್ತೀರಾ? ಗಾಂಧಿ, ಸುಭಾಶ್ ಚಂದ್ರ ಬೋಸ್ ಫೋಟೋ ಚಿಕ್ಕದಾಗಿ ಹಾಕಿದ್ದಾರೆ ಎಂದು ಕೇಳಿದ್ದೆ ತಪ್ಪಾ…? ಹೋರಾಟ ಮಾಡಿದರೂ.. ಜೈಲಿಗೆ ಹಾಕುತ್ತಾರಾ…? ಕೆಟ್ಟ ರಾಜಕೀಯ ಮಾಡುವುದನ್ನು ಬಿಡಿ. ಮೊದಲೇ ಕಾಂಗ್ರೆಸ್ ಬಗ್ಗೆ ಬೇಜಾರಿತ್ತು… ಈಗ ಮತ್ತಷ್ಟು ಬೇಜಾರಾಯಿತು ಎಂದು ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next