Advertisement

ಕೊಲೆಗೆ ಯತಿಸಿದ ಆರೋಪಿ ಬಂಧಿಸಿ

06:32 PM Oct 06, 2021 | Team Udayavani |

ತುಮಕೂರು: ಉತ್ತರ ಪ್ರದೇಶದ ಹಕ್ಕೊತ್ತಾಯಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತ ಸಮುದಾಯವನ್ನು ಕೊಲೆಗೆ ಯತ್ನಿಸಿದ ಆರೋಪಿಗಳನ್ನು ಬಂಧಿಸಿ, ಮಂತ್ರಿಗಳನ್ನು ವಜಾ ಮಾಡಿ ಎಂದು ಒತ್ತಾಯಿಸಿ ಮಂಗಳವಾರ ಸಂಯುಕ್ತ ಹೋರಾಟ ಕರ್ನಾಟಕದ ಮುಖಂಡರ ನಿಯೋಗದಲ್ಲಿ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Advertisement

ನಗರದ ಡೀಸಿ ಕಚೇರಿ ಮುಂದೆ ಸಮಾವೇಶಗೊಂಡ ಸಂಯುಕ್ತ ಹೋರಾಟ ಕರ್ನಾಟಕದ ಜಿಲ್ಲಾ ಸಂಚಾಲಕರಾದ ಸಿ.ಯತಿರಾಜು, ರಾಜ್ಯ ರೈತ ಸಂಘ ಜಿಲ್ಲಾ ಅಧ್ಯಕ್ಷತೆ ಎ.ಗೋವಿಂದರಾಜು, ರವೀಶ್‌, ಪ್ರಾಂತ ರೈತ ಸಂಘದ ಬಿ.ಉಮೇಶ್‌, ಅರ್‌.ಕೆ.ಎಸ್‌ ಎಸ್‌.ಎನ್‌. ಸ್ವಾಮಿ, ಸಿಐಟಿಯು ಸೈಯದ್‌ ಮುಜೀಬ್‌, ಕಟ್ಟಡ ಕಾರ್ಮಿಕರ ಸಂಘದ ಬೆಟ್ಟಪ್ಪ ಸೇರಿದಂತೆ ವಿವಿಧ ರೈತ ಪರ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿ ಎಸ್‌.ಎಸ್‌. ಪಾಟಿಲ್‌ ಅವರೊಂದಿಗೆ ಮಾತುಕತೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರ ಪತಿಗಳಿಗಳಿಗೆ ಮನವಿ ಸಲ್ಲಿಸಿದರು.

ಕೃತ್ಯಯಿಂದ ಆತಂಕ: ಈ ವೇಳೆ ಮಾತನಾಡಿದ ಮುಖಂಡರು, ದೇಶದಾದ್ಯಂತ ಬೆಳೆಯುತ್ತಿರುವ ಚಳವಳಿಯನ್ನು ಮುರಿಯುವ ಸಂಚಿನ ಭಾಗವಾಗಿ ಸಚಿವರ ಬೆಂಗಾವಲಿನ ವಾಹನಗಳನ್ನು ಚಲಾಯಿಸಿ, ಎಂಟು ಜನರ ಹತ್ಯೆ ನಡೆಸಲಾದ ಕುಕೃತ್ಯವು ಆತಂಕ ಮತ್ತು ತಲ್ಲಣವನ್ನುಂಟು ಮಾಡಿದೆ. ಒಕ್ಕೂಟ ಸರ್ಕಾರದ ಗೃಹ ಖಾತೆಯ ರಾಜ್ಯ ಸಚಿವರಾದಅಜಯ್‌ ಮಿಶ್ರ ಹಾಗೂ ಆತನ ಮಗ ಮತ್ತು ಸಂಬಂಧಿಗಳು ಈ ದುಷ್ಕೃತ್ಯದಲ್ಲಿ ಪಾಲ್ಗೊಂಡಿದ್ದಾರೆ.  ಈ ಘಟನೆಯನ್ನು ಖಂಡಿಸಿ ಸಂಯುಕ್ತ ಹೋರಾಟ ಕರ್ನಾಟಕದ ವತಿಯಿಂದ ಜಿಲ್ಲಾಧಿಕಾರಿ ಎಸ್‌.ಎಸ್‌. ಪಾಟಿಲ್‌ ಮೂಲಕ ರಾಷ್ಟ್ರ ಪತಿಗಳಿಗೆ ಮನವಿಯನ್ನು ಕಳಹಿಸಲಾಯಿತು ಎಂದರು.

ಘಟನೆ ಖಂಡಿಸದ ಪ್ರಧಾನಿ: ಮನವಿಯಲ್ಲಿ ಹರ್ಯಾಣದ ಸಿಎಂ ಬಿಜೆಪಿ ಮತ್ತು ಸಂಘ ಪರಿವಾರದವರಿಗೆ ರೈತ ಚಳವಳಿಯನ್ನು ಮುರಿಯಲು ಲಾಠಿ ಮುಂತಾದ ಆಯುಧಗಳ ಮೂಲಕ ದಾಳಿ ನಡೆಸಲು ಬಹಿರಂಗವಾಗಿ ಕರೆ ನೀಡುವ ಮೂಲಕ ಸಂವಿಧಾನಾತ್ಮಕ ಅಧಿಕಾರವನ್ನುಸಂವಿಧಾನ ವಿರೋಧಿಯಾಗಿ ದುರ್ಬಳಕೆ ಮಾಡಿದ್ದಾರೆ.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಸೇರಿದಂತೆ ಒಕ್ಕೂಟ ಸರ್ಕಾರದ ಸಚಿವರು ರೈತ ಚಳವಳಿಯನ್ನು ನಿಂದಿಸುವ ಅಪರಾಧ ಮಾಡಿದ್ದಾರೆ. ಇಂತಹ ಅಮಾನುಷ ಮತ್ತು ತೀವ್ರ ಸ್ವರೂಪದ ಅಧಿಕಾರ ದುರುಪಯೋಗದ ಘಟನೆಗಳನ್ನು ಪ್ರಧಾನ ಮಂತ್ರಿಗಳು ಖಂಡಿಸದೇ ಇರುವುದು ಸಂಚಿನ ವಾಸನೆಯನ್ನು ಬಹಿರಂಗ ಪಡಿಸುತ್ತದೆ ಎಂದು ಆರೋಪಿಸಲಾಗಿದೆ.

Advertisement

ರೈತ ಚಳವಳಿ ಮುರಿಯಲು ಅಸಾಧ್ಯ: ಸಂಘಟನೆಗಳು ಕಾರ್ಪೊàರೇಟ್‌ ಕಂಪನಿಗಳ ನೇತೃತ್ವದ ಬರ್ಬರ ಘಟನೆಗಳನ್ನು ಬಲವಾಗಿ ಮತ್ತು ದೊಡ್ಡ ಧ್ವನಿಯಲ್ಲಿ ಖಂಡಿಸುತ್ತದೆ. ಇಂತಹ ಯಾವುದೇ ದೌರ್ಜನ್ಯ ಹಾಗೂ ಅಧಿಕಾರದ ದುರುಪಯೋಗದ ಮೂಲಕ ರೈತ ಚಳವಳಿಯನ್ನು ಮುರಿಯಲಾಗದೆಂಬುದು ಕಳೆದೆರೆಡು ವರ್ಷಗಳಿಂದ ದೇಶದಾದ್ಯಂತ ಮತ್ತು ದೆಹಲಿ ಗಡಿಗಳ ಸುತ್ತಮುತ್ತ ಕಳೆದ ಹತ್ತು ತಿಂಗಳಿಂದ ದಶ ಲಕ್ಷಾಂತರ ಕುಟುಂಬಗಳು ನಡೆಸುತ್ತಿರುವ ಐತಿಹಾಸಿಕ ಚಳವಳಿಯೆ ಸಾಕ್ಷಿಯಾಗಿದೆ ಎಂದು ಎಚ್ಚರಿಸಿದೆ.

ಮಂತ್ರಿ ಸ್ಥಾನದಿಂದ ವಜಾ ಮಾಡಿ: ತಕ್ಷಣವೇ ರಾಷ್ಟ್ರಪತಿಗಳು ತಾವು ಮಧ್ಯ ಪ್ರವೇಶಿಸಿ ಒಕ್ಕೂಟ ಸರ್ಕಾರದ ಗೃಹ ಖಾತೆಯ ರಾಜ್ಯ ಸಚಿವ ಅಜಯ ಮಿಶ್ರ ಅವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಬೇಕು.

ಸಚಿವ ಅಜಯ ಮಿಶ್ರ ಹಾಗೂ ಆತನ ಮಗ ಆಶಿಶ್‌ ಮಿಶ್ರ ಮೋನು ಆತನ ಗುಂಡಾ ಪಡೆಯನ್ನು ಬಂಧಿಸಬೇಕು ಮತ್ತು ಕೊಲೆ ಪಾತಕ ಪ್ರಕರಣವೆಂದು ಮೊಕದ್ದಮೆಗಳನ್ನು ಹೂಡಬೇಕು. ಈ ಒಟ್ಟು ಪ್ರಕರಣವನ್ನು ಸುಪ್ರಿಂ ಕೋರ್ಟ್‌ನಲ್ಲಿ ಉನ್ನತ ನ್ಯಾಯಾಂಗ ತನಿಖೆಗೆ ಕ್ರಮವಹಿಸಬೇಕು. ಹರ್ಯಾಣ ಮುಖ್ಯಮಂತ್ರಿಯನ್ನು, ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಲು ಅಗತ್ಯ ಕ್ರಮವಹಿಸಬೇಕು.

ಈ ಕೊಲೆಪಾತಕ ದುಷ್ಕೃತ್ಯದಲ್ಲಿಹುತಾತ್ಮರಾದ ರೈತ ಕುಟುಂಬಗಳಿಗೆ ತಲಾ ಒಂದು ಕೋಟಿ ರೂಗಳ ಪರಿಹಾರ ನೀಡಬೇಕು ಮತ್ತು ತೀವ್ರವಾಗಿ ಗಾಯಗೊಂಡವರಿಗೂ ಅಗತ್ಯ ಉಚಿತ ಚಿಕಿತ್ಸೆ ಹಾಗೂ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಜಿಲ್ಲಾ ಸಮಸ್ಯೆಗಳ ಬಗ್ಗೆ ಜಂಟಿ ಸಭೆ ಕರೆಯಿರಿ-

ಮನವಿ ಸ್ವಿಕರಿಸಿದ ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ್‌ ಅವರಿಗೆ ಸಂಘದ ಪ್ರತಿನಿಧಿಗಳು ಜಿಲ್ಲಾ ಹಂತದ ಸಮಸ್ಯೆಗಳನ್ನು ಪರಿಹಾರ ಕಾಣಲು ರೈತ ಸಂಘಟನೆಗಳ ಜೊತೆ ಜಂಟಿ ಸಭೆಯನ್ನು ನಡೆಸಲು ರೈತ ಸಂಘದ ಪ್ರತಿನಿಧಿಗಳು ಕೋರಿದರು. ನೀರಾವರಿ ಪ್ರಶ್ನೆಗಳು, ಜಿಲ್ಲೆಯ ಎಲ್ಲಾ ಕೆರೆಗಳಿಗೆ ಕುಡಿಯುವ ನೀರು ಒದಗಿಸುವ ಕಾರ್ಯದ ಕುರಿತು ಸಹ ಸಭೆಯ ಅಗತ್ಯ ಇದೆ ಎಂದು ನಿಯೋಗದಲ್ಲಿದ್ದ ಸದಸ್ಯರು ಮನವಿ ಮಾಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next