Advertisement

ಕ್ಷುಲ್ಲಕ ವಿಚಾರಕ್ಕೆ ಕೊಲೆ: ನಾಲ್ವರ ಬಂಧನ

11:34 AM Dec 28, 2018 | Team Udayavani |

ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವಿನ ಜಗಳ ಒಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ಡಿ.ಜಿ.ಹಳ್ಳಿ ಠಾಣೆ ವ್ಯಾಪ್ತಿಯ ದೊಡ್ಡಣ್ಣ ನಗರದಲ್ಲಿ ಬುಧವಾರ ರಾತ್ರಿ ನಡೆದಿದೆ.

Advertisement

ದೊಡ್ಡಣ್ಣನಗರ ನಿವಾಸಿ ಜಗದೀಶ್‌ ಕುಮಾರ್‌ (28) ಕೊಲೆಯಾದವನು. ಕೊಲೆ ಪ್ರಕರಣ ಸಂಬಂಧ ಕೂಲಿ ಕಾರ್ಮಿಕ ಅರುಣ್‌ (21) ಹಾಗೂ ಈತನ ಸ್ನೇಹಿತರಾದ ಶರತ್‌ (22), ಜಾನ್‌ಪೀಟರ್‌ (22) ಮತ್ತು ಅಪ್ಪು (22) ಎಂಬುವವರನ್ನು ಬಂಧಿಸಲಾಗಿದೆ.

ಟೈಲ್ಸ್‌ ಹಾಗೂ ಪೇಟಿಂಗ್‌ ಕೆಲಸ ಮಾಡುವ ಜಗದೀಶ್‌ ಕುಮಾರ್‌, ಡಿ.25ರಂದು ಕಂಠಪೂರ್ತಿ ಮದ್ಯ ಸೇವಿಸಿದ್ದಾನೆ. ಬಳಿಕ ದೊಡ್ಡಣ್ಣನಗರದ ಚರ್ಚ್‌ ಮುಂಭಾಗ ಹೋಗುವಾಗ ಎದುರಿಗೆ ಬಂದ ಅರುಣ್‌ ಜತೆ ಕ್ಷುಲ್ಲಕ ವಿಚಾರಕ್ಕೆ ಜಗಳ ತೆಗೆದು ಹಲ್ಲೆ ನಡೆಸಿದ್ದಾನೆ.

ಇದರಿಂದ ಆಕ್ರೋಶಗೊಂಡ ಅರುಣ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತನ್ನ ಸ್ನೇಹಿತರಾದ ಶರತ್‌, ಜಾನ್‌ಪೀಟರ್‌ ಮತ್ತು ಅಪ್ಪುನನ್ನು ಕರೆ ತಂದಿದ್ದಾನೆ. ನಂತರ ನಾಲ್ವರೂ ಜಗದೀಶ್‌ ಜತೆ ವಾಗ್ವಾದ ನಡೆಸಿದ್ದಾರೆ. ಇದು ವಿಕೋಪಕ್ಕೆ ಹೋಗಿದ್ದು, ಆರೋಪಿ ಅರುಣ್‌, ಅಲ್ಲೇ ಇದ್ದ ಕಬ್ಬಿಣ ಪೈಪ್‌ನಿಂದ ಜಗದೀಶ್‌ ಕುಮಾರ್‌ ತಲೆಗೆ ಹೊಡೆದಿದ್ದಾನೆ.

ಪರಿಣಾಮ ತೀವ್ರ ರಕ್ತಸ್ರಾವದಿಂದ ಗಾಯಗೊಂಡಿದ್ದ ಜಗದೀಶ್‌ನನ್ನು ಸ್ಥಳೀಯರು ಕೂಡಲೇ ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲಿಸಿದ್ದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫ‌ಲಕಾರಿಯಾಗದೆ ಜಗದೀಶ್‌ ಬುಧವಾರ ರಾತ್ರಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next