Advertisement

ಯುವತಿ ವಿಚಾರಕ್ಕೆ ಕೊಲೆ: ಐವರ ಬಂಧನ

05:59 AM Feb 27, 2019 | Team Udayavani |

ಬೆಂಗಳೂರು: ಬಿಳೇಕಲ್ಲಹಳ್ಳಿಯ 5ನೇ ಕ್ರಾಸ್‌ನಲ್ಲಿ ಯುವತಿ ವಿಚಾರಕ್ಕೆ ನಡೆದಿದ್ದ ಯುವಕನೊಬ್ಬನ ಕೊಲೆ ಪ್ರಕರಣವನ್ನು ಬೇಧಿಸಿರುವ ಮೈಕೋ ಲೇಔಟ್‌ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಪುಟ್ಟೇನಹಳ್ಳಿಯ ಮನ್ಸೂರ್‌ ಷರೀಫ್, ತಲ್ಲಘಟ್ಟಪುರದ ಪೀಟರ್‌, ಪ್ರವೀಣ್‌, ಸಂತೋಷ್‌, ಕಿರಣ್‌ ಅಲಿಯಾಸ್‌ ಕಪ್ಪೆ ಬಂಧಿತರು.

Advertisement

ಆರೋಪಿಗಳಿಂದ ಒಂದು ಕಾರು, ಮೂರು ಬೈಕ್‌ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಫೆ.14ರಂದು ಪುಟ್ಟೇನಹಳ್ಳಿ ನಿವಾಸಿ ಮೊಹಮ್ಮದ್‌ ಯುಸೂಫ್ (26) ಎಂಬಾತನನ್ನು ಹತ್ಯೆಗೈದಿದ್ದರು ಎಂದು ಪೊಲೀಸರು ಹೇಳಿದರು.

ಯುಸೂಫ್‌ ನಗರದಲ್ಲಿ ವೆಲ್ಡಿಂಗ್‌ ಕೆಲಸ ಮಾಡಿಕೊಂಡಿದ್ದು, ಅಸ್ಸಾಂ ಮೂಲದ ಯುವತಿಯನ್ನು ಪ್ರೀತಿಸಿದ್ದ. ಇದೇ ಯುವತಿಯನ್ನು ಆರೋಪಿ ಮನ್ಸೂರ್‌ ಷರೀಫ್‌ ಕೂಡ ಇಷ್ಟಪಟ್ಟಿದ್ದ. ಈ ವಿಚಾರಕ್ಕೆ ಇಬ್ಬರ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು.

ಫೆ.14ರಂದು ತಡರಾತ್ರಿ 12.30ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಅರಕೆರೆಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಹೋಗುತ್ತಿದ್ದ ಯುಸೂಫ್ನನ್ನು ಹಿಂಬಾಲಿಸಿದ ದುಷ್ಕರ್ಮಿಗಳು, ಡಿಕ್ಕಿ ಹೊಡೆದಿದ್ದಾರೆ. ಬಳಿಕ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next