Advertisement

ಮುನಿಯಾಲು ರಕ್ತದಾನ ಶಿಬಿರ: 52 ಯುನಿಟ್‌ರಕ್ತ ಸಂಗ್ರಹ

10:36 PM Sep 23, 2019 | Sriram |

ಅಜೆಕಾರು: ಮುನಿಯಾಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುನಿಯಾಲು ಲಯನ್ಸ್‌ಕ್ಲಬ್‌, ಜಿಲ್ಲಾರಕ್ತ ನಿಧಿ ಮತ್ತು ಮುನಿಯಾಲು ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಕಾರ ದಲ್ಲಿ ರಕ್ತದಾನ ಶಿಬಿರ ನಡೆಯಿತು.

Advertisement

ವಿದ್ಯಾರ್ಥಿಗಳು, ಲಯನ್ಸ್‌ ಸದಸ್ಯರು ರಕ್ತದಾನ ಮಾಡಿದರು. ಮುನಿಯಾಲು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸೌಮ್ಯಾ ಶಿಬಿರ ಉದ್ಘಾಟಿಸಿದರು.
ಮುನಿಯಾಲು ಲಯನ್ಸ್‌ ಕ್ಲಬ್‌ ಪ್ರಮುಖರಾದ ಗೋಪಿನಾಥ ಭಟ್‌, ಅಧ್ಯಕ್ಷ ಮಂಜುನಾಥ್‌ ಟಿ., ಕಾಲೇಜಿನ ಪ್ರಾಂಶುಪಾಲ ಸತೀಶ ಪೈ, ಅತಿಥಿ ಉಪನ್ಯಾಸಕರು, ರಕ್ತನಿಧಿ ಕೇಂದ್ರದ ಪ್ರಮುಖರು, ಲಯನ್ಸ್‌ಕ್ಲಬ್‌ನ ಶಂಕರ ಶೆಟ್ಟಿ, ಅಶೋಕ ಎಂ. ಶೆಟ್ಟಿ, ಖಜಾನೆ ಸಂದೇಶ ಶೆಟ್ಟಿ, ಡಾ| ಸುದರ್ಶನ್‌ ಹೆಬ್ಟಾರ್‌, ಉಪನ್ಯಾಸಕರಾದ ಕೋಕಿಲಾ ಎಚ್‌.ಎಸ್‌., ದತ್ತಕುಮಾರ್‌, ಹಾಜಿಬಾಬ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next