Advertisement

Munirathna Case: ಮೂವರಿಗೆ ನಿರೀಕ್ಷಣ ಜಾಮೀನು

12:37 AM Oct 15, 2024 | Team Udayavani |

ಬೆಂಗಳೂರು: ಶಾಸಕ ಮುನಿರತ್ನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದ ಮೂವರು ಆರೋಪಿಗಳಿಗೆ 82ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರೀಕ್ಷಣ ಜಾಮೀನು ಮಂಜೂರು ಮಾಡಿದೆ.

Advertisement

4ನೇ ಆರೋಪಿಯಾಗಿರುವ ಕಿರಣ್‌ ಕುಮಾರ್‌, ಆತನ ಸ್ನೇಹಿತರಾದ ಎ5 ಲೋಹಿತ್‌ ಕುಮಾರ್‌, ಎ6 ಮಂಜುನಾಥ್‌ಗೆ ಜಾಮೀನು ಮಂಜೂರಾಗಿದೆ. ತನಿಖೆಗೆ ಸಹಕಾರ ನೀಡಬೇಕು ಎಂದು ಕೋರ್ಟ್‌ ಷರತ್ತು ವಿಧಿಸಿದೆ.

ಆರೋಪಿ ಕಿರಣ್‌ ಕುಮಾರ್‌ ತನ್ನನ್ನು ಮುನಿರತ್ನ ಸಂಬಂಧಿ ಎಂದು ಸಂತ್ರಸೆಗೆ ಪರಿಚಯಿ ಸಿ ಕೊಂಡಿದ್ದಾನೆ. ಬಳಿಕ ಸ್ನೇಹಿತರಾದ ಲೋಹಿತ್‌ ಕುಮಾರ್‌, ಮಂಜುನಾಥ್‌ ಜತೆ ತಂಡ ಕಟ್ಟಿಕೊಂಡು ಕೆಲವು ನಾಯಕರ ಹನಿಟ್ರ್ಯಾಪ್‌ ಮಾಡುವ ಉದ್ದೇಶದಿಂದ ರೆಸಾರ್ಟ್‌ವೊಂದಕ್ಕೆ ಹೋಗಿ, ನಿರ್ದಿಷ್ಟ ಕೊಠಡಿಯಲ್ಲಿ ರಹಸ್ಯ ಕೆಮರಾ ಇರಿಸಿದ್ದರು. ಜತೆಗೆ ಹನಿಟ್ರ್ಯಾಪ್‌ಗೆ ಬಳಸಿಕೊಂಡಿದ್ದ ಮಹಿಳೆಯರ ಅಶ್ಲೀಲ ವೀಡಿಯೋ ಚಿತ್ರೀಕರಿಸಿಕೊಂಡಿದ್ದರು. ಮೂವರ ವಿರುದ್ಧ ಅತ್ಯಾಚಾರ ಮತ್ತು ಹನಿಟ್ರ್ಯಾಪ್‌ಗೆ ಸಹಕಾರ ನೀಡಿದ ಆರೋಪದಡಿ ಸಂತ್ರಸ್ತೆ ಕಗ್ಗಲೀಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next