Advertisement

ಮುಂಡ್ಕೂರು: ಸರಕಾರಿ ಶಾಲೆ ಬಾವಿ ಸ್ವತ್ಛಗೊಳಿಸಿದ ಶಿಕ್ಷಕರು

10:59 PM Apr 09, 2019 | sudhir |

ಬೆಳ್ಮಣ್‌: ರಜೆಗೂ ಮುನ್ನ ಶಾಲೆಯ ಬಾವಿಯನ್ನು ಸ್ವತ್ಛಗೊಳಿಸುವ ಮೂಲಕ ಮುಂಡ್ಕೂರಿನ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Advertisement

ಮುಖ್ಯ ಶಿಕ್ಷಕಿ ಪೂರ್ಣಿಮಾ ಭಟ್‌ ಅವರ ಹೊಸಕಲ್ಪನೆಯಂತೆ ಈ ಕಾರ್ಯ ನಡೆದಿದ್ದು, ಶಾಲೆಗೆ ರಜೆ ಸಿಕ್ಕ ಬಳಿಕ ಬಾವಿಯ ಬಗ್ಗೆ , ಅಕ್ಷರ ದಾಸೋಹದ ಕೊಠಡಿ ಹಾಗೂ ಶಾಲೆಗಳ ಪ್ರಮುಖ ಪರಿಕರಗಳ ಬಗ್ಗೆ ಯಾರೂ ಗಮನ ಕೊಡುವುದಿಲ್ಲ. ಗಿಡಗಂಟಿಗಳು ಬೆಳೆದ ಬಾವಿಯನ್ನು ಸ್ವತ್ಛಗೊಳಿಸಿದರೆ ಶಾಲಾರಂಭದ ಸಂದರ್ಭ ಮಳೆಗೆ ಬಾವಿ ತುಂಬುತ್ತದೆ. ಅದೇ ರೀತಿ ಶಾಲೆಯ ಅಕ್ಷರ ದಾಸೋಹ ಕೊಠಡಿ, ಪರಿಕರಗಳನ್ನೂ ಒಪ್ಪ ಓರಣವಾಗಿರಿಸಿದರೆ ಶಾಲಾರಂಭದ ಸಂದರ್ಭ ಇವುಗಳ ಬಳಕೆಗೆ ಇನ್ನಷ್ಟು ಸುಲಭವಾಗುತ್ತದೆ ಎನ್ನುತ್ತಾರೆ ಇಲ್ಲಿನ ಶಿಕ್ಷಕರು.

ಮುಂಡ್ಕೂರು ಸ.ಮಾ.ಹಿ.ಪ್ರಾ. ಶಾಲೆ ಇತರ ಶಾಲೆಗಳಿಗೆ ಮಾದರಿ ಎನಿಸಿದೆ. ಇಲ್ಲಿನ ಶಿಕ್ಷಕರು, ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳ ಪರಿಶ್ರಮ ಈ ಶಾಲೆಯನ್ನು ಉಳಿಸಿ ಬೆಳಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹಳೆ ವಿದ್ಯಾರ್ಥಿ ಅರುಣ್‌ ರಾವ್‌ ತಿಳಿಸಿದ್ದಾರೆ.

ನಿರ್ವಹಣೆಗೆ ಚಿಂತನೆ
ಶಾಲಾರಂಭದ ಸಂದರ್ಭ ಶಾಲೆಯ ಸ್ಥಿತಿ ಭೂತ ಬಂಗಲೆಯಂತಾಗಬಾರದೆಂದು ರಜೆಗೆ ಮುನ್ನವೇ ಶಾಲೆಯ ವಸ್ತುಗಳ ನಿರ್ವಹಣೆಯ ಬಗ್ಗೆ ಗಂಭೀರವಾಗಿ ಚಿಂತಿಸಿ ಈ ಕ್ರಮ ಕೈಗೊಂಡಿದ್ದೇವೆ. ಶಾಲೆಯ ಇತರ ಶಿಕ್ಷಕರು, ಪೋಷಕರು ಸಹಕರಿಸುತ್ತಿದ್ದಾರೆ.
-ಪೂರ್ಣಿಮಾ ಭಟ್‌, ಮುಖ್ಯ ಶಿಕ್ಷಕಿ

Advertisement

Udayavani is now on Telegram. Click here to join our channel and stay updated with the latest news.

Next