Advertisement

ಹೊಸದಿಲ್ಲಿ ಅಗ್ನಿ ದುರಂತ ಪ್ರಕರಣ: ಮುಂದ್ಕಾ ಕಟ್ಟಡದ ಮಾಲಕನ ಬಂಧನ

12:32 PM May 16, 2022 | Team Udayavani |

ಹೊಸದಿಲ್ಲಿ: ಮೂರು ದಿನಗಳ ಹಿಂದೆ ಜರಗಿದ್ದ ಮುಂದ್ಕಾ ಕಟ್ಟಡದ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಟ್ಟಡದ ಮಾಲಕ ಮನೀಶ್‌ ಲಾಕ್ರಾ ಎಂಬವರನ್ನು ಘೆಹ್ರಾ ಮೋದ್‌ ಎಂಬಲ್ಲಿ ಬಂಧಿಸಲಾಗಿದೆ.

Advertisement

ಈ ಕುರಿತಂತೆ ಮಾಹಿತಿ ನೀಡಿರುವ ದಿಲ್ಲಿಯ ಪೊಲೀಸ್‌ ಆಯುಕ್ತ ಸಮೀರ್‌ ಶರ್ಮಾ, ಮನೀಶ್‌ರವರಿಗಾಗಿ ದಿಲ್ಲಿ ಮತ್ತು ಹರಿಯಾಣದಲ್ಲಿ ತೀವ್ರ ಶೋಧ ನಡೆಸಲಾಗಿತ್ತು. ಆದರೆ, ಆತ ಉತ್ತರಾಖಾಂಡದ ಹರಿದ್ವಾರದ ಕಡೆಗೆ ತೆರಳುತ್ತಿರುವ ಖಚಿತ ಮಾಹಿತಿಯ ಮೇರೆಗೆ ಆತನನ್ನು ಘೆಹ್ರಾ ಮೋದ್‌ನಲ್ಲಿ ಬಂಧಿಸಲಾಯಿತು ಎಂದು ಹೇಳಿದ್ದಾರೆ.

ಮೇ 13ರ ಸಂಜೆ ಕಟ್ಟಡದಲ್ಲಿ ಅಗ್ನಿ ಅವಘಡ ಉಂಟಾಗಿತ್ತು. ಕಟ್ಟಡದ ನಾಲ್ಕನೇ ಮಹಡಿಯಲ್ಲಿ ನೆಲೆಸಿದ್ದ ಮೋದ್‌, ಬೆಂಕಿ ಹತ್ತಿರುವುದನ್ನು ಗಮನಿಸಿ, ಕುಟುಂಬ ಸಮೇತ ಪಕ್ಕದ ಕಟ್ಟಡಕ್ಕೆ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮತ್ತೊಂದೆಡೆ, ಕಟ್ಟಡದಿಂದ ಹೊರತೆಗೆ­ಯಲಾಗಿದ್ದ 27 ಶವಗಳಲ್ಲಿ 14 ಮಂದಿಯ ಗುರುತು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next