Advertisement

ಮುಂದಿನ ಬದಲಾವಣೆಗೆ ಸಿದ್ಧರಾಗಿ

06:00 AM Sep 14, 2018 | Team Udayavani |

ಗೀತರಚನೆಕಾರನಾಗಬೇಕು ಅಂತ ತುಮಕೂರಿ­ನಿಂದ ಕೆಂಪು ಬಸ್ಸು ಹತ್ತಿ ಬಂದಿದ್ದರಂತೆ ಪ್ರವೀಣ್‌ ಭೂಷಣ್‌. ಆ ನಂತರ ಗೀತರಚನೆಕಾರರಾದ ಅವರು, ಈಗ ನಟ-ನಿರ್ದೇಶಕರೂ ಆಗಿದ್ದಾರೆ, “ಮುಂದಿನ ಬದಲಾವಣೆ’ ಎಂಬ ಚಿತ್ರದ ಮೂಲಕ. 

Advertisement

ಇಂಥದ್ದೊಂದು ಚಿತ್ರವನ್ನು ಸದ್ದಿಲ್ಲದೆ ಮಾಡಿ ಮುಗಿಸಿರುವ ಪ್ರವೀಣ್‌, ಇತ್ತೀಚೆಗೆ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ಹಾಡುಗಳನ್ನು ಬಿಡುಗಡೆ ಮಾಡಿದ್ದು ಪ್ರವೀಣ್‌ ಅವರಿಂದ ಮೊದಲ ಬಾರಿಗೆ ಹಾಡು ಬರೆಸಿಕೊಂಡ ಮಣಿಕಾಂತ್‌ ಕದ್ರಿ. ಮಣಿಕಾಂತ್‌ ಜೊತೆಗೆ ನಟ ಅನಿರುದ್ಧ್ ಸಹ ಇದ್ದರು. ಪ್ರವೀಣ್‌ ಒಂದು ಚಿತ್ರ ಮಾಡಬೇಕು ಎಂದು ಕನಸು ಕಂಡು, ಹಲವು ನಿರ್ಮಾಪಕರಿಗೆ ಕಥೆ ಹೇಳಿದ್ದಾರೆ. ಆದರೆ, ಯಾರೊಬ್ಬ ನಿರ್ಮಾಪಕರೂ ಚಿತ್ರ ಮಾಡುವುದಕ್ಕೆ ಮುಂದೆ ಬರಲಿಲ್ಲವಂತೆ. ಅದರಲ್ಲೂ ಒಬ್ಬ ನಿರ್ಮಾಪಕರು ಆರು ತಿಂಗಳ ಕಾಲ ಕಾಯಿಸಿದರಂತೆ. ಕೊನೆಗೆ ಪ್ರವೀಣ್‌ ಮನೆಯವರೇ ಕಡಿಮೆ ಬಜೆಟ್‌ನಲ್ಲಿ ಚಿತ್ರ ಮಾಡೋಕೆ ಮುಂದಾದರಂತೆ. 

“ಇದೊಂದು ಅದ್ಭುತ ಕಥೆ ಅಲ್ಲ. ಆದರೆ, ಎಲ್ಲೂ ಬೋರ್‌ ಹೊಡೆಸದೆ, ಮನರಂಜಿಸುವ ಕಥೆ ಇದು. ಇದರಲ್ಲಿ ಕಾಮಿಡಿ, ಥ್ರಿಲ್‌ ಎಲ್ಲವೂ ಇದೆ. 90 ಪರ್ಸೆಂಟ್‌ ಹೊಸಬರೇ ಈ ಚಿತ್ರದಲ್ಲಿದ್ದಾರೆ. ಚಿತ್ರದ ಕೆಲಸಗಳು ಬಹುತೇಕ ಮುಗಿದಿದ್ದು, ಅಕ್ಟೋಬರ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಮೊದಲ ಮೂರು ದಿನಗಳಲ್ಲೇ ಬಂದು ಚಿತ್ರ ನೋಡಿ ಹಾರೈಸಿ’ ಎಂದು ಪ್ರವೀಣ್‌ ಕರೆ ನೀಡಿದರು. “ಮುಂದಿನ ಬದಲಾವಣೆ’ ಚಿತ್ರದಲ್ಲಿ ಸಂಗೀತ, ಲಕ್ಷ್ಮಣ್‌ ಗೌಡ, ಮಾಲಾಶ್ರೀ, ಕಾವ್ಯ ಮುಂತಾದವರು ನಟಿಸಿದ್ದಾರೆ. ಕೋಟೇಶ್ವರ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕಾರ್ತಿಕ್‌ ವೆಂಕಟೇಶ್‌ ಸಂಗೀತ ಸಂಯೋಜಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next