ಮುಂಡರಗಿ : ಅರಣ್ಯ ಇಲಾಖೆ ನಡೆಸುತ್ತಿರುವ ಅಕ್ರಮ ಸಾಗುವಳಿ ಭೂಮಿಯ ತೆರವು ಕಾರ್ಯಾಚರಣೆಯನ್ನು ವಿರೋಧಿಸಿ ಇಬ್ಬರು ಮಹಿಳೆಯರು ಕ್ರಿಮಿನಾಶಕ ಸೇವಿಸಿದ ಘಟನೆ ನಡೆದಿದೆ.
ಕೆಲೂರು ಗ್ರಾಮದವರಾದ ಸರೋಜಾ ಶಂತನಗೌಡ ಪಾಟೀಲ ಹಾಗೂ ನಿರ್ಮಲಾ ರಾಮನಗೌಡ ಪಾಟೀಲ ಕ್ರಿಮಿನಾಶ ಸೇವಿಸಿದ ಮಹಿಳೆಯರು.
ಇಬ್ಬರನ್ನು ತಾಲೂಕಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅದರಲ್ಲಿ ಸರೋಜಾ ಪಾಟೀಲ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಗದಗ ಜಿಲ್ಲಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನೆ ಮಾಡಲಾಗಿದೆ.
ತಾಲೂಕಿನ ಕೆಲೂರು ಗ್ರಾಮದ ವ್ಯಾಪ್ತಿಯ ಕಪ್ಪತ್ತಗುಡ್ಡದಲ್ಲಿ ಅಕ್ರಮ ಸಾಗುವಳಿ ಭೂಮಿಯ ತೆರುವು ಕಾರ್ಯಾಚರಣೆಯನ್ನು ಕಪ್ಪತ್ತಹಿಲ್ಸ್ ಅರಣ್ಯ ಇಲಾಖೆ ನಡೆಸುತ್ತಿವೆ. ಈ ವೇಳೆ ತಾವು ಹಲವಾರು ವರ್ಷಗಳಿಂದ ಕೃಷಿಯನ್ನು ಮಾಡಿಕೊಂಡು ಬಂದಿರುವ ಭೂಮಿಯನ್ನು ಅಕ್ರಮ ಸಾಗುವಳಿ ಭೂಮಿ ಎಂದು ಅರಣ್ಯ ಇಲಾಖೆ ತೆರವು ಕಾರ್ಯಾಚರಣೆ ನಡೆಸಲು ಮುಂದಾಗಿದೆ ಈ ವೇಳೆ ತೆರವು ಕಾರ್ಯಾಚರಣೆಯನ್ನು ವಿರೋಧಿಸಿದ ರೈತ ಮಹಿಳೆ ಕ್ರಿಮಿನಾಶಕ ಸೇವಿಸಿದ್ದಾರೆ.
ಇದನ್ನೂ ಓದಿ : ಶಿಡ್ಲಘಟ್ಟ : ಬೈಕಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಮರಿಗೆ ಉರುಳಿ ಬಿದ್ದ ಕಾರು