Advertisement

ಮುಂಡರಗಿ: ದ್ವಿ ಚಕ್ರ ವಾಹನ-ಬಸ್‌ ಅಪಘಾತ; ಸವಾರ ಸಾವು

11:49 AM Jun 04, 2023 | Team Udayavani |

ಮುಂಡರಗಿ: ಕೆಎಸ್ಆರ್ ಟಿಸಿ ಬಸ್ ಹಾಗೂ ದ್ವಿ ಚಕ್ರ ವಾಹನ ಅಪಘಾತ ಸಂಭವಿಸಿ ಸವಾರ ಮೃತಪಟ್ಟ ಘಟನೆ ಪಟ್ಟಣದ ಬ್ಯಾಲವಾಡಗಿ ಎಂಬಲ್ಲಿ ಸಂಭವಿಸಿದೆ.

Advertisement

ದ್ವಿಚಕ್ರ ವಾಹನದ ಸವಾರ ಮಂಜಪ್ಪ ರಾಮಣ್ಣ ಬಂಡಿ (42) ಮೃತಪಟ್ಟ ವ್ಯಕ್ತಿ.

ಬ್ಯಾಲವಾಡಗಿಯಲ್ಲಿನ ಹೇಸ್ಕಾಂ ಮುಂದಿರುವ ರಸ್ತೆಯಲ್ಲಿ ಕೆಎಸ್ಆರ್ ಟಿಸಿ ಬಸ್ ಚಕ್ರದಡಿಗೆ ದ್ವಿ ಚಕ್ರ ವಾಹನ ಸಿಲುಕಿದ ಪರಿಣಾಮ ಈ ಅವಘಡ ನಡೆದಿದೆ.

ಅರಭಾವಿ- ಚಳ್ಳಕೇರಿ ರಸ್ತೆ ಕಾಮಗಾರಿ ಅಪೂರ್ಣಗೊಂಡಿದ್ದರಿಂದ ಈ ಅಪಘಾತ ಸಂಭಸಿರುವ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next