Advertisement

ಗಂಗಾವತಿ: ನಗರಸಭೆ ಸದಸ್ಯನ‌ ಕಿಡ್ನಾಪ್ ಪ್ರಕರಣ ; ಆರೋಪಿ ಬಂಧನ 

10:33 PM Dec 28, 2020 | sudhir |

ಗಂಗಾವತಿ: ನಗರಸಭೆ ಸದಸ್ಯ ಮನೋಹರ ಸ್ವಾಮಿ ಮುದೇನೂರು ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರವಿ ಲಿಂಗರಾಜ ಅವರನ್ನು ನಗರಠಾಣೆಯ ಪೊಲೀಸರು ಸೋಮವಾರ ಮಧ್ಯಾಹ್ನ ಬಂಧಿಸಿದ್ದಾರೆ.

Advertisement

ಗಂಗಾವತಿ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯ ಮನೋಹರ ಸ್ವಾಮಿ ಮುದೇನೂರು ಅವರನ್ನು ಕಿಡ್ನಾಪ್ ಮಾಡಲಾಗಿತ್ತು. ಕಾರವಾರ ಜಿಲ್ಲೆಯ ಹಳಿಯಾಳ ಪಟ್ಟಣದಲ್ಲಿ ಮನೋಹರಸ್ವಾಮಿ ಮುದೇನೂರು ಕಿಡ್ನಾಪ್ ಮಾಡಿದವರಿಂದ ತಪ್ಪಿಸಿಕೊಂಡು ಅಲ್ಲಿನ ಪೊಲೀಸ್ ಠಾಣೆಗೆ ತೆರಳಿ ಕಿಡ್ನಾಪ್ ಮಾಡಿರುವ ಕುರಿತು ದೂರು ನೀಡಿದರು.

ಅಲ್ಲಿಂದ ಪರಾರಿಯಾಗಿದ್ದ ರವಿ ಲಿಂಗರಾಜ ನಾಪತ್ತೆಯಾಗಿದ್ದ ಸೋಮವಾರ ಬೇರೊಂದು ಪ್ರಕರಣಕ್ಕೆ ಸಂಬಂದಿಸಿದಂತೆ ಗಂಗಾವತಿ ಗ್ರಾಮೀಣ ಗೆ ರವಿ ಲಿಂಗರಾಜ ಕ್ಯಾಂಪ್ ಆಗಮಿಸಿದ್ದ ಸಂದರ್ಭದಲ್ಲಿ ನಗರಠಾಣೆಯ ಪಿಐ ವೆಂಕಟಸ್ವಾಮಿ ನೇತೃತ್ವದಲ್ಲಿ ಪೊಲೀಸರು ರವಿ ಲಿಂಗರಾಜ ಕ್ಯಾಂಪ್ ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.

ಇದನ್ನೂ ಓದಿ:ಸಂಸದ ಅನಂತ್‌ ಕುಮಾರ್‌ ಹೆಗಡೆ ವಿರುದ್ಧದ ಪ್ರಕರಣ ರದ್ದು

Advertisement

Udayavani is now on Telegram. Click here to join our channel and stay updated with the latest news.

Next