Advertisement

ಮುಂಬೈ ಟೆಸ್ಟ್ ಗೆ ಮಳೆ ಕಾಟ: ಟಾಸ್ ಪ್ರಕ್ರಿಯೆ ವಿಳಂಬ, ಮೂವರು ಗಾಯದಿಂದ ಔಟ್

10:38 AM Dec 03, 2021 | Team Udayavani |

ಮುಂಬೈ: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಪ್ರತಿಕೂಲ ಹವಾಮಾನದ ಕಾಟ ಆರಂಭವಾಗಿದೆ. ಕಳೆದೆರಡು ದಿನ ಮುಂಬೈನಲ್ಲಿ ಭಾರೀ ಮಳೆಯಾಗಿರುವ ಕಾರಣ ಪಿಚ್ ಒದ್ದೆಯಾಗಿದ್ದು, ಟಾಸ್ ವಿಳಂಬವಾಗಿದೆ.

Advertisement

ಎರಡು ದಿನಗಳಿಂದ ಮಳೆಯಾಗುತ್ತಿರುವ ಕಾರಣ ಪಿಚ್ ಪರಿಸ್ಥಿತಿ 100% ಆಗಿಲ್ಲ. ನಮ್ಮ ಮುಖ್ಯ ಕಾಳಜಿ ಆಟಗಾರರ ಸುರಕ್ಷತೆಯಾಗಿದೆ. ನಾವು ಸಮಯಕ್ಕೆ ಸರಿಯಾಗಿ ಆಟ ಪ್ರಾರಂಭಿಸುತ್ತಿಲ್ಲ. ನಮ್ಮ ಕಾಳಜಿ ರನ್-ಅಪ್ ಮತ್ತು ಕ್ಲೋಸ್-ಇನ್ ಪ್ರದೇಶಗಳು, ಆದ್ದರಿಂದ ಇದು ಸುಧಾರಿಸಲು ಆಶಿಸುತ್ತಿದ್ದೇವೆ. ಪಿಚ್ ಖಂಡಿತವಾಗಿಯೂ ಉತ್ತಮವಾಗಿದೆ, ಇದು ಹುಲ್ಲಿನ ಪ್ರದೇಶಗಳು ಒದ್ದೆಯಾಗಿದೆ ಎಂದು ಅಂಪೈರ್ ಗಳು ಹೇಳಿದ್ದಾರೆ.

ಇದನ್ನೂ ಓದಿ:ರೈಲಿನಡಿ ಬೀಳುತ್ತಿದ್ದ ವಿದ್ಯಾರ್ಥಿನಿಯನ್ನು ಸಿನಿಮೀಯ ರೀತಿ ರಕ್ಷಿಸಿದ ವಿದ್ಯಾರ್ಥಿ!

ಗಾಯಗೊಂಡಿರುವ ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ ಮತ್ತು ಇಶಾಂತ್ ಶರ್ಮಾ ತಂಡದಿಂದ ಹೊರಬಿದ್ದಿದ್ದಾರೆ. ಕಾನ್ಪುರ ಟೆಸ್ಟ್ ಪಂದ್ಯಕ್ಕೆ ವಿಶ್ರಾಂತಿ ಪಡೆದಿದ್ದ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ ಆಗಮಿಸಿದ್ದಾರೆ.

ಕಾನ್ಪುರ ಪಂದ್ಯ ರೋಚಕ ಡ್ರಾನಲ್ಲಿ ಅಂತ್ಯವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next