Advertisement

ಟಿಕೆಟ್‌ರಹಿತ ರೈಲು ಪ್ರಯಾಣ:ದಂಡ ಪಾವತಿಗೆ ದುಡ್ಡಿಲ್ಲದೆ ಹರಾಜಾದ ಬಸಂತಿ

05:22 PM Apr 13, 2020 | Team Udayavani |

ಮುಂಬಯಿ : ಟಿಕೆಟ್‌ ರಹಿತ ಪ್ರಯಾಣಕ್ಕಾಗಿ ಸಿಕ್ಕಿಬಿದ್ದ “ಬಸಂತಿ’ ಬಳಿ ದಂಡ ಪಾವತಿಸಲು ದುಡ್ಡಿಲ್ಲದ ಕಾರಣಕ್ಕೆ ಆಕೆಯನ್ನು ರೈಲ್ವೆ ಅಧಿಕಾರಿಗಳು ಹರಾಜು ಹಾಕಿ ದಂಡ ವಸೂಲಿ ಮಾಡಿದ ಘಟನೆ ವರದಿಯಾಗಿದೆ.

Advertisement

ಅಂದ ಹಾಗೆ ಬಸಂತಿ ಒಬ್ಬಳೇ, ಟಿಕೆಟ್‌ ಇಲ್ಲದೆ, ಪ್ರಯಾಣಿಸುತ್ತಿರಲಿಲ್ಲ; ಆಕೆಯ ಜತೆಗೆ ಒಬ್ಬ ಪುರುಷನೂ ಇದ್ದ.  ರೈಲ್ವೆ ನಿಯಮಗಳ ಪ್ರಕಾರ ಬಸಂತಿಯನ್ನು  ರೈಲಿನಲ್ಲಿ ಒಯ್ಯುವಂತಿಲ್ಲ. ಟಿಕೆಟ್‌ ಕಲೆಕ್ಟರ್‌ ಬಂದಾಗ “ಬಸಂತಿ’ಯ ಜತೆಗಿದ್ದ ವ್ಯಕ್ತಿ ತನ್ನಲ್ಲಿ ಟಿಕೆಟ್‌ ಇಲ್ಲದ ಕಾರಣಕ್ಕೆ ದಂಡ ಪಾವತಿಸಲಾಗದೇ ಅಲ್ಲಿಂದ ಪರಾರಿಯಾದ. ಹಾಗಾಗಿ ಟಿಕೆಟ್‌ ಕಲೆಕ್ಟರ್‌ ವಶದಲ್ಲಿ  ಬಸಂತಿ ಒಂಟಿಯಾಗಿ ಉಳಿದಳು.

ಟಿಕೆಟ್‌ ರಹಿತ ಪ್ರಯಾಣಕ್ಕಾಗಿ ವಿಧಿಸುವ ದಂಡದ ಹಣವನ್ನು ವಸೂಲಿ ಮಾಡಲೇಬೇಕಾದ ಪ್ರಮೇಯ ಈಗ ರೈಲ್ವೇ ಅಧಿಕಾರಿಗಳಿಗೆ  ಸಂಕಷ್ಟವನ್ನು ತಂದೊಡ್ಡಿತ್ತು. ಕೊನೆಗೆ ಅವರು “ಬಸಂತಿ’ಯನ್ನು  2,500 ರೂ.ಗಳಿಗೆ ಹರಾಜು ಹಾಕಿ ದಂಡದ ಹಣವನ್ನು ವಸೂಲಿ ಮಾಡಿದರು. ಮುಂಬಯಿಯ ಲೋಕಲ್‌ ರೈಲ್ವೆಯ ಮಸ್ಜಿದ್‌ ಸ್ಟೇಶನ್‌ನಲ್ಲಿ “ಬಸಂತಿ ಹರಾಜು ಪ್ರಸಂಗ’ ನಡೆಯಿತು.

ಮುಂಬಯಿ ಲೋಕಲ್‌ ಟ್ರೈನಿನಲ್ಲಿ ಟಿಕೆಟ್‌ ರಹಿತ ಪ್ರಯಾಣಕ್ಕೆ 256 ರೂ. ದಂಡ ಇದೆ. ಆದರೆ ಬಸಂತಿ ಮಾರಾಟದಿಂದ ರೈಲ್ವೆ ಇಲಾಖೆಗೆ ಇದರ ಹತ್ತು ಪಟ್ಟು ಲಾಭವಾಯಿತು !

Advertisement

ಇಷ್ಟಕ್ಕೂ ಟಿಕೆಟ್‌ ರಹಿತ ಪ್ರಯಾಣಕ್ಕಾಗಿ ಸಿಕ್ಕಿ ಬಿದ್ದು ದಂಡ ಪಾವತಿಸಲು ಹಣ ಇಲ್ಲದ ಕಾರಣಕ್ಕೆ ರೈಲ್ವೇ ಅಧಿಕಾರಿಗಳಿಂದ ಹರಾಜು ಹಾಕಲ್ಪಟ್ಟು ದಂಡ ವಸೂಲಿ ನಡೆದ ಪ್ರಕರಣದ “ಬಸಂತಿ’ ಯಾರೆಂದು ತಿಳಿದಿದ್ದೀರಿ ? ಆಕೆ ಒಂದು ಆಡು !

Advertisement

Udayavani is now on Telegram. Click here to join our channel and stay updated with the latest news.

Next