Advertisement

3 ಬಿಜೆಪಿ ಶಾಸಕರಿಗೆ 100 ಕೋಟಿ ರೂ.ಗೆ ಬೇಡಿಕೆ; ನಾಲ್ವರ ಬಂಧನ

02:06 PM Jul 20, 2022 | Team Udayavani |

ಮುಂಬಯಿ: ಹೊಸದಾಗಿ ರಚಿತವಾದ ಮಹಾರಾಷ್ಟ್ರದ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ-ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ನೀಡುವುದಾಗಿ 100 ಕೋಟಿ ರೂ.ಗೆ ಬೇಡಿಕೆ ಇಟ್ಟ ಆರೋಪದ ಮೇಲೆ ಮುಂಬೈ ಕ್ರೈಂ ಬ್ರಾಂಚ್ ನಾಲ್ವರನ್ನು ಸೋಮವಾರ ಬಂಧಿಸಿದೆ.

Advertisement

3 ಬಿಜೆಪಿ ಶಾಸಕರಿಗೆ 100 ಕೋಟಿ ರೂಪಾಯಿಗಳನ್ನು ಕೇಳಿದ ಆರೋಪದ ಮೇಲೆ 4 ಆರೋಪಿಗಳನ್ನು ಸುಲಿಗೆ ನಿಗ್ರಹ ದಳ ಬಂಧಿಸಿದೆ. ಆರೋಪಿಗಳನ್ನು ರಿಯಾಜ್ ಶೇಖ್, ಯೋಗೇಶ್ ಕುಲಕರ್ಣಿ, ಸಾಗರ್ ಸಂಗ್ವಾಯ್ ಮತ್ತು ಜಾಫರ್ ಉಸ್ಮಾನಿ ಎಂದು ಗುರುತಿಸಲಾಗಿದೆ ಎಂದು ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವ ಮುನ್ನವೇ ಈ ಸುದ್ದಿ ಬಂದಿದ್ದು, ಸಂಪುಟ ರಚನೆ ಕಸರತ್ತಿನ ಅಂತಿಮ ದಿನಾಂಕವು ಇನ್ನೂ ಚರ್ಚೆಯಲ್ಲಿದ್ದರೂ, ಪಕ್ಷದ ಕಾರ್ಯಸೂಚಿಯಲ್ಲಿ ಸಂಪುಟ ವಿಸ್ತರಣೆಯು ಹೆಚ್ಚಿನದಾಗಿದೆ ಮತ್ತು ಜುಲೈ ನಾಲ್ಕನೇ ವಾರದಲ್ಲಿ   ರಚನೆ ನಡೆಯಲಿದೆ ಎಂದು ಬಿಜೆಪಿಯ ಮೂಲಗಳು ಹೇಳಿವೆ.

ರಾಜಕೀಯ ಪರಿಸ್ಥಿತಿಯ ಲಾಭ ಪಡೆಯುವ ಸಲುವಾಗಿ ನಾಲ್ವರು ಆರೋಪಿಗಳು ಸಂಪುಟದಲ್ಲಿ ಸಚಿವ ಸ್ಥಾನ ನೀಡುವ ಹೆಸರಿನಲ್ಲಿ 3 ಶಾಸಕರಿಗೆ ವಂಚಿಸಲು ಯತ್ನಿಸಿದ್ದಾರೆ ಎಂದು ಮುಂಬೈ ಅಪರಾಧ ವಿಭಾಗದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next