Advertisement

ಭೂಗತ ಪಾತಕಿ ರವಿ ಪೂಜಾರಿ ಬೇಡಿಕೆಗೆ ಅಚ್ಚರಿಗೊಂಡ ಕೋರ್ಟ್! ಪೂಜಾರಿ ಕೇಳಿಕೊಂಡಿದ್ದೇನು..?

06:50 PM Mar 10, 2021 | Team Udayavani |

ಮುಂಬೈ : ತನ್ನನ್ನು ಪೊಲೀಸ್ ಕಸ್ಟಡಿಗೆ ಹೋಗಲು ಅನುಮತಿಸಬೇಕು ಎಂದು ಬೇಡಿಕೆಯಿಟ್ಟು ತನ್ನ ಪರ ವಕೀಲ ಹಾಗೂ ನ್ಯಾಯಾಲಯವನ್ನೇ ಅಚ್ಚರಿಗೊಳ್ಳುವಂತೆ ಮಾಡಿದ್ದಾರೆ ಭೂಗತ ಪಾತಕಿ ರವಿ ಪೂಜಾರಿ.

Advertisement

ಮುಂಬೈ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಸಂದರ್ಭದಲ್ಲಿ ಪೂಜಾರಿ ಪರ ವಕೀಲ ಪೊಲೀಸ್ ಕಸ್ಟಡಿಯನ್ನು ಇನ್ನೂ ಮುಂದುವರಿಸಬಾರದು ಎಂದು ಪೂಜಾರಿ ಪರ ವಕೀಲ ವಾದಿಸುತ್ತಿದ್ದರು, ಆಗ ಪೂಜಾರಿ ಮುಂದೆ ಬಂದು ನಾನು‌ ಪೊಲೀಸರೊಂದಿಗೆ ಹೋಗುತ್ತೇನೆ ಎಂದು ಹೇಳಿ ಇಡಿ ನ್ಯಾಯಾಲಯವೇ ಅಚ್ಚರಿ ಆಗುವಂತೆ ಮಾಡಿದ್ದಾರೆ.

ಓದಿ : ಲಾಕ್ಡೌನ್ ಪರಿಣಾಮದಿಂದ 30% ಜನರಲ್ಲಿ ಹೆಚ್ಚಾದ ದೇಹದ ತೂಕ..! ಮೂತ್ರಪಿಂಡಕ್ಕೂ ಎಫೆಕ್ಟ್..!

ಇನ್ನು, ಪೂಜಾರಿಯ ಬೇಡಿಕೆಯ ಹಿನ್ನಲೆಯಲ್ಲಿ ನ್ಯಾಯಾಲಯ ಮಾರ್ಚ್ 15 ರ ವರೆಗೆ ಪೂಜಾರಿ ಕಸ್ಟಡಿಯನ್ನು ಮುಂದೂಡಿದೆ.

ಮಂಗಳವಾರ ರವಿ ಪೂಜಾರಿಯನ್ನು ಮುಂಬೈ ವಿಶೇಷ ನ್ಯಾಯಾಲಯಕ್ಕೆ  ಹಾಜರುಪಡಿಸಲಾಗಿತ್ತು. ಹೆಚ್ಚಿನ ತನಿಖೆ ಪೂರ್ಣಗೊಂಡಿದೆ, ಆರೋಪಿಯ ತನಿಖೆಗೆ ಇನ್ನು ಕೆಲವು ದಿನಗಳು ಅಗತ್ಯವಿದೆ ಎಂದು ಪೊಲೀಸ್ ಪರ ವಕೀಲರು ಕೇಳಿದ್ದರು. ಆದರೆ, ಇದನ್ನು ರವಿ ಪೂಜಾರಿ ಪರ ವಕೀಲರು ವಿರೋಧಿಸಿದ್ದರು.

Advertisement

ಈ ಸಂದರ್ಭದಲ್ಲಿ, ರವಿ ಪೂಜಾರಿ, ನನ್ನನ್ನು ಕಸ್ಟಡಿಗೆ ಬಿಡಬೇಕು. ನನಗೆ ಇನ್ನೂ ಕೆಲವು ವಿಷಯಗಳನ್ನು ಹೇಳುವುದಕ್ಕಿದೆ ಎಂದು ಕೋರ್ಟ್ ಮುಂದೆ ಮನವಿ ಮಾಡಿಕೊಂಡಿದ್ದಾರೆ.

2016ರ ಬಾಂಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂಜಾರಿಯನ್ನು ಪೊಲೀಸ್ ತನಿಖೆಗೊಳಪಡಿಸಿತ್ತು. ಹಲವು ಅಪರಾಧಗಳಿಗೆ ನೇತ್ರತ್ವ ನೀಡಿರುವ ರವಿ ಪೂಜಾರಿ ಮೇಲೆ ಒಟ್ಟು 52 ಕ್ರಿಮಿನಲ್ ಪ್ರಕರಣಗಳಿವೆ. ಕಳೆದ ಒಂದು ವರ್ಷದಿಂದ ಬೆಂಗಳೂರಿನ ಸೆರೆಮನೆಯಲ್ಲಿದ್ದ ರವಿ, ಕೊಚ್ಚಿಯ ಬ್ಯೂಟಿ ಪಾರ್ಲರ್ ಬಾಂಬ್ ದಾಳಿ ಪ್ರಕರಣದಲ್ಲೂ ಆರೋಪಿಯಾಗಿದ್ದರು.

ಓದಿ : ಯುವತಿಯ ಮೂಗಿಗೆ ಡಿಚ್ಚಿ ಕೊಟ್ಟ ಫುಡ್ ಡೆಲಿವರಿ ಬಾಯ್..! ಕಾರಣ ?

Advertisement

Udayavani is now on Telegram. Click here to join our channel and stay updated with the latest news.

Next