Advertisement

ಮೂಳೂರು : ಬಸ್‌ಗೆ ಬಸ್‌ ಅಡ್ಡವಿಟ್ಟು ಚಾಲಕನ ಮೇಲೆ ಹಲ್ಲೆ

09:10 PM Jun 27, 2022 | Team Udayavani |

ಕಾಪು : ಉಡುಪಿಯಿಂದ ಕಟೀಲು ಕಡೆಗೆ ಹೋಗುತ್ತಿದ್ದ ಬಸ್‌ಗೆ ಎಕ್ಸ್‌ಪ್ರೆಸ್‌ ಬಸ್‌ ಅನ್ನು ಅಡ್ಡವಿಟ್ಟು ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ಬಸ್‌ ಚಾಲಕ ಉಚ್ಚಿಲ ಭಾಸ್ಕರ ನಗರ ನಿವಾಸಿ ಶಂಶೀರ್‌ ಅಹಮದ್‌ (28) ಹಲ್ಲೆಗೊಳಗಾಗಿದ್ದು, ಇವರ ಮೇಲೆ ಮತ್ತೂಂದು ಬಸ್‌ನಲ್ಲಿದ್ದ ಮೂವರು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.

ಜೂ. 24ರಂದು ಶಂಶೀರ್‌ ಅಹಮ್ಮದ್‌ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಡುಪಿ ಕಡೆಯಿಂದ ಕಟೀಲು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಬಸ್‌ನ್ನು ಮೂಳೂರು ಸುನ್ನಿ ಸೆಂಟರ್‌ ಬಳಿ ಓವರ್‌ಟೇಕ್‌ ಮಾಡಿಕೊಂಡು ಬಂದು ಬಸ್ಸಿಗೆ ಅಡ್ಡ ನಿಲ್ಲಿಸಿ ಬಸ್ಸಿನಿಂದ ಇಳಿದ ರಾಯಿಜ್‌, ಸಮೀರ್‌ ಡಿಜಿ ಮತ್ತು ಹಾಸೀಮ್‌ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.

ಆರೋಪಿಗಳು ಬಸ್ಸಿಗೆ ಹತ್ತಿ ಚಾಲಕನ ಕಾಲರ್‌ಪಟ್ಟಿ ಹಿಡಿದು ಕೈಯಿಂದ ಹೊಡೆಯುತ್ತಿರುವಾಗ ಮತ್ತೂಂದು ಕಾರಿನಲ್ಲಿ ಬಂದ ಸಲೀಂ, ಜಪ್ಟಲ್‌ ಖಾದರ್‌ ಮತ್ತು ಇನ್ನೊಬ್ಬ ವ್ಯಕ್ತಿ ಬಸ್ಸನ್ನು ಹತ್ತಿ ಅವಾಚ್ಯ ಶಬ್ದದಿಂದ ಬೈದು, ಬಸ್‌ನ ಕೀ ತೆಗೆದು ದೂಡಿ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

ಇದನ್ನೂ ಓದಿ : ಅಂಜನಾದ್ರಿಗೆ ಭೂಸ್ವಾಧೀನ : ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ, ಹೆಚ್ಚಿನ ಪರಿಹಾರಕ್ಕೆ ಪಟ್ಟು

Advertisement

Udayavani is now on Telegram. Click here to join our channel and stay updated with the latest news.

Next