Advertisement

ಮೂಲ್ಕಿ: ಕಲ್ಲಿನಿಂದ ಮುಖಕ್ಕೆ ಜಜ್ಜಿ ವ್ಯಕ್ತಿ ಕೊಲೆ; ಆರೋಪಿ ಬಂಧನ

10:20 AM Mar 22, 2022 | Team Udayavani |

ಮೂಲ್ಕಿ: ಬಪ್ಪನಾಡು ಗ್ರಾಮದ ಮೂಲ್ಕಿ ಪೇಟೆಯ ಪುನರೂರು ಪೆಟ್ರೋಲ್ ಬಂಕ್ ಬಳಿ ಮಾ. 19 ರಂದು ನಡೆದ ಕೊಲೆಗೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳು ವ್ಯಕ್ತಿಯೊರ್ವನನ್ನು ಬಂಧಿಸಿದ್ದಾರೆ.

Advertisement

ಬಂಧಿತ ಆರೋಪಿಯನ್ನು ತಮಿಳುನಾಡು ಮೂಲದ ಮುರುಗನ್ (46) ಎಂದು ಗುರುತಿಸಲಾಗಿದ್ದು, ಇವರು ಪ್ರಸ್ತುತ ತೋಕೂರು ನಿವಾಸಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಶನಿವಾರ ರಾತ್ರಿ ಮುಖವನ್ನು ಕಲ್ಲಿನಿಂದ ಜಜ್ಜಿ ವ್ಯಕ್ತಿಯನ್ನು ಕೊಲೆ ಮಾಡಿದ್ದು, ಭಾನುವಾರ ಮೃತದೇಹ ಪತ್ತೆಯಾಗಿದೆ. ಮೃತರನ್ನು ಕಾರ್ಕಳದ ಮುಂಡ್ಕೂರಿನ ಕಟ್ಟಡ ಕಾರ್ಮಿಕ ಹರೀಶ್ ಸಾಲಿಯಾನ್ (37) ಎಂದು ಗುರುತಿಸಲಾಗಿದೆ.

ಹರೀಶ್ ಸಾಲಿಯಾನ್ ಮತ್ತು ಆರೋಪಿ ಮುರುಗನ್ ಶನಿವಾರ ರಾತ್ರಿ ದೇವಸ್ಥಾನಕ್ಕೆ ಬಂದಿದ್ದಾಗ, ಹಣಕಾಸಿನ ವ್ಯವಹಾರದ ವಿಚಾರವಾಗಿ ಮನಸ್ತಾಪವುಂಟಾಗಿದೆ.

ಬಳಿಕ ಇಬ್ಬರೂ ಬಾರ್‌ಗೆ ಹೋಗಿ ಕುಡಿದಿದ್ದರು. ಸಣ್ಣಪುಟ್ಟ ಹಣಕಾಸಿನ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದ್ದು, ಸಿಟ್ಟಿಗೆದ್ದ ಮುರುಗನ್ ಹರೀಶ್ ನನ್ನು ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

Advertisement

ಇದನ್ನೂ ಓದಿ:ರಷ್ಯಾ ಆಕ್ರಮಣ ವಿರೋಧಿಸುವಲ್ಲಿ ಭಾರತದಿಂದ ‘ಅಸ್ಥಿರ’ ನಿಲುವು: ಜೋ ಬೈಡನ್

ಕೊಲೆ ಆರೋಪಿ ಮುರುಗನ್ ನನ್ನು ಮುಲ್ಕಿ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ .

ಮಂಗಳೂರು ನಗರದ ಮಂಗಳೂರು ಉತ್ತರ ವಿಭಾಗದ ಎಸಿಪಿ ಶ್ರೀ ಮಹೇಶ್ ಕುಮಾರ್ ರವರ ಮಾರ್ಗದರ್ಶನದಲ್ಲಿ, ಮುಲ್ಕಿ ಪೊಲೀಸ್ ನಿರೀಕ್ಷಕರಾದ ಶ್ರೀ ಕುಸುಮಾಧರ್ ರವರ ನೇತೃತ್ವದಲ್ಲಿ, ಪಿಎಸ್ಐ ಶ್ರೀ ವಿನಾಯಕ ತೋರಗಲ್, ಪ್ರೋಬೆಷನರಿ ಪಿಎಸ್ ಐ ಕೃಷ್ಣ, ಎಎಸ್ಐ ಉಮೇಶ್, ಚಂದ್ರಶೇಖರ್ ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next