Advertisement

ಮಗನನ್ನು ಶಾಲೆಯಿಂದ ಕರೆದುಕೊಂಡು ಹೋಗಿ ನಾಪತ್ತೆಯಾಗಿದ್ದಾನೆಂದು ನಾಟಕವಾಡಿದ ತಂದೆ !

12:16 AM Sep 18, 2022 | Team Udayavani |

ಮೂಲ್ಕಿ: ಶಾಲೆಗೆ ಬಂದ ಹುಡುಗನನ್ನು ಆತನ ತಂದೆ ಶಾಲೆಯಿಂದ ಕರೆದುಕೊಂಡು ಹೋಗಿ ಸ್ನೇಹಿತನ ಮನೆಯಲ್ಲಿರಿಸಿ ತನ್ನ ಮಗ ಶಾಲೆಗೆ ಬಂದವನು ಎಲ್ಲಿದ್ದಾನೆ ಎಂದು ಪ್ರಶ್ನಿಸಿ ಶಾಲೆಯಲ್ಲಿ ರಂಪಾಟ ನಡೆಸಿದ ಘಟನೆಯೊಂದು ಮೂಲ್ಕಿ ಠಾಣಾ ವ್ಯಾಪ್ತಿಯ ಕಾರ್ನಾಡಿನಲ್ಲಿ ನಡೆದಿದೆ.

Advertisement

ಹೆಜಮಾಡಿಯ ನಿವಾಸಿ ಹರೀಶ್‌ ಅವರು ತನ್ನ 9 ವರ್ಷದ ಮಗ ಶಾಲೆಯಲ್ಲಿ ಇಲ್ಲದಿರುವುದನ್ನು ಪ್ರಶ್ನಿಸಿ ಶಾಲೆಯ ಸಿಬಂದಿಗೆ ಗದರಿಸಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾನೆ. ಪೊಲೀಸರು ಧಾವಿಸಿ ಬಂದು ಶಾಲೆಯ ಬದಿಯ ಅಂಗಡಿಯೊಂದರ ಸಿಸಿ ಕೆಮರಾದ ಫ‌ೂಟೇಜ್‌ ಪರಿಶೀಲನೆ ನಡೆಸಿದಾಗ ಹುಡುಗ ಶಾಲೆಗೆ ಬಂದಿರುವುದು ದಾಖಲಾಗಿತ್ತು. ಸ್ವಲ್ಪ ಹೊತ್ತಿನಲ್ಲಿ ಆತನ ತಂದೆಯೇ ರಿಕ್ಷಾದಲ್ಲಿ ಕುಳ್ಳಿರಿಸಿ ಕರೆದುಕೊಂಡು ಹೋದ ದೃಶ್ಯವೂ ಸೆರೆಯಾಗಿತ್ತು. ಪೊಲೀಸರು ಹರೀಶ್‌ನನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ತಾನು ಕರೆದುಕೊಂಡು ಹೋಗಿರುವುದಾಗಿ ಒಪ್ಪಿಕೊಂಡಿದ್ದಾನೆ.

ತಂದೆ ಹರೀಶ್‌ ಬಾಲಕನನ್ನು ಕೆರೆಕಾಡಿನ ಸ್ನೇಹಿತನ ಮನೆಯಲ್ಲಿ ಬಿಟ್ಟು ಬಂದು ಮಗ ನಾಪತ್ತೆಯಾಗಿರುವುದಾಗಿ ನಾಟಕ ಮಾಡಿದ್ದಾನೆ. ಬಾಲಕನನ್ನು ಕರೆದುಕೊಂಡು ಬಂದ ಅನಂತರ ಪ್ರಕರಣ ಇತ್ಯರ್ಥವಾಗಿದೆ. ಆದರೆ ಯಾಕೆ ಬಾಲಕನ ತಂದೆ ಈ ರೀತಿ ವರ್ತಿಸಿದ್ದಾನೆ ಎಂಬುವುದು ತಿಳಿದು ಬಂದಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next