Advertisement

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

12:46 AM Apr 30, 2024 | Team Udayavani |

ಚಿಕ್ಕಮಗಳೂರು: ಪ್ರವಾಸಕ್ಕೆ ಬಂದಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಕಾಫಿತೋಟದ ಮಾಲಕರೊಬ್ಬರ ಜಮೀನಿನಲ್ಲಿದ್ದ ಬೃಹತ್‌ ಕೃಷಿ ಹೊಂಡದಲ್ಲಿ ಈಜಲು ಹೋಗಿ ಮೃತಪಟ್ಟಿರುವ ಘಟನೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.

Advertisement

ಮೃತಪಟ್ಟರನ್ನು ಹಾವೇರಿ ಜಿಲ್ಲೆ ಮಕರವಳ್ಳಿ ಗ್ರಾಮದ ಎಂ.ಪಿ.ಆಕಾಶ್‌ (21) ಎಂದು ಗುರುತಿಸಲಾಗಿದೆ.

ಇವರು 15 ವರ್ಷಗಳಿಂದ ಬೆಂಗಳೂರಿನಲ್ಲಿರುವ ತನ್ನ ಅಣ್ಣನ ಮನೆಯಲ್ಲಿ ಉಳಿದುಕೊಂಡಿದ್ದರು. ಎ.27ರಂದು ಅಣ್ಣ ಕುಶಾಲ್‌ ಹಾಗೂ ಸ್ನೇಹಿತ ದಾರ ಭರತ್‌, ಶ್ರೇಯಸ್‌ ಜತೆಗೆ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಪ್ರವಾಸಕ್ಕೆ ಬಂದಿದ್ದು, ಗೋಣಿಬೀಡು ಗ್ರಾಮದ ಜಯರಾಮೇ ಗೌಡ ಅವರ ಹೋಮ್‌ಸ್ಟೇಯಲ್ಲಿ ಉಳಿದುಕೊಂಡಿದ್ದರು. ಅಲ್ಲಿ ದುರಂತ ಸಂಭವಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next