Advertisement

ಮೂಡಿಗೆರೆ: ಕಾರ್ಯಾಚರಣೆಯ ಮೊದಲ ದಿನವೇ ಒಂದು ಕಾಡಾನೆ ಸೆರೆ

10:33 PM Nov 28, 2022 | Team Udayavani |

ಮೂಡಿಗೆರೆ:  ತಾಲೂಕಿನ ಕುಂದೂರು ಕೆಂಜಿಗೆ ಭಾಗದಲ್ಲಿ ಮೂರು ಕಾಡಾನೆಗಳನ್ನು ಸೆರೆಹಿಡಿಯಲು ಸೋಮವಾರದಿಂದ ಪ್ರಾರಂಭಿಸಿದ ಕಾರ್ಯಾಚರಣೆಯಲ್ಲಿ ಒಂದು ಆನೆ ಸೆರೆಯಾಗಿದೆ.

Advertisement

ಎಸ್ಟೇಟ್ ಕುಂದೂರು ಬಳಿ ಕಾಡಾನೆಯೊಂದಕ್ಕೆ ಅರವಳಿಕೆ ಹಾಕಲಾಗಿದ್ದು ಆ ಕಾಡಾನೆ ಸುಮಾರು 2 ಕಿ.ಮೀ ದೂರದ ಕುಂಡ್ರಾ ಎಂಬಲ್ಲಿ ನೆಲಕುರುಳಿದ್ದು ಕಾರ್ಯಾಚರಣೆ ನಡೆಸಿ ಸೆರೆಹಿಡಿಯಲಾಗಿದೆ. ಕಾರ್ಯಾಚರಣೆ ಪ್ರಾರಂಭಿಸಿದ ಕೆಲವೇ ಗಂಟೆಗಳಲ್ಲಿ ಒಂದು ಆನೆ ಸೆರೆಯಾಗಿದೆ.

ಸೆರೆಯಾಗಿರುವ ಕಾಡಾನೆ ಗಾತ್ರದಲ್ಲಿ ಚಿಕ್ಕದಿದೆ. ಈಗ ಸೆರೆಯಾಗಿರುವ ಕಾಡಾನೆಯನ್ನು ಎರಡು ಸಾಕಾನೆಗಳ ಸುಪರ್ದಿಯಲ್ಲಿ ನಾಗರಹೊಳೆಯ ದುಬಾರೆ ಆನೆಕ್ಯಾಂಪ್ ಗೆ ಸ್ಥಳಾಂತರಿಸಲಾಗುವುದು.ಎರಡು ದಿನಗಳ ಬಿಡುವಿನ ಬಳಿಕ ಮುಂದಿನ ಆನೆ ಹಿಡಿಯಲು ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.

ಮೂರು ಕಾಡಾನೆಗಳ ಸೆರೆಗೆ ಅಭಿಮನ್ಯು, ಮಹಾರಾಷ್ಟ್ರ ಭೀಮ, ಕರ್ನಾಟಕ ಭೀಮ, ಮಹೇಂದ್ರ, ಪ್ರಶಾಂತ್, ಅರ್ಜುನ್ ಎಂಬ ಸಾಕಾನೆಗಳು ಬಂದಿದ್ದು ಉಳಿದ ಎರಡು ಕಾಡಾನೆಗಳ ಸೆರೆಗೆ ಕಾರ್ಯಾಚರಣೆ ಮುಂದುವರಿದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next