Advertisement

ಮುಧೋಳ: ಸ್ಥಳಾಂತರವಾಗುವ ಮನಸ್ಸಿದೆ, ಮಾರ್ಗವಿಲ್ಲ!

04:18 PM Jul 30, 2024 | Team Udayavani |

ಉದಯವಾಣಿ ಸಮಾಚಾರ
ಮುಧೋಳ: ಪ್ರತಿ ಸಾರಿ ಪ್ರವಾಹ ಬಂದಾಗ ಒಕ್ಕಲೇಳುವಂತಾಗಿದೆ. ನಮಗೊಂದು ಶಾಶ್ವತ ನೆಲೆ ನೀಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಪ್ರತಿನಿ ಧಿಗಳ ಮುಂದೆ ಗೋಗರೆದರೂ ಭರವಸೆ ಹೊರತು ಮತ್ತೇನೂ ಸಿಕ್ಕಿಲ್ಲ. ಸರಿ ಸುಮಾರು 2490 ಜನಸಂಖ್ಯೆ ಹಾಗೂ 1058 ಜಾನುವಾರು ಹೊಂದಿರುವ ಮಿರ್ಜಿ ಗ್ರಾಮ ಸ್ಥಳಾಂತರಿಸಬೇಕೆನ್ನುವ ಬೇಡಿಕೆ ಹಲವಾರು ದಶಕದಿಂದ ಇದ್ದರೂ ಜಾಗದ ನೆಪವೊಡ್ಡುವ ಅಧಿಕಾರಿಗಳು ಕಣ್ಣೊರೆಸುವ ತಂತ್ರ ಅನುಸರಿಸುತ್ತಿದ್ದಾರೆ.

Advertisement

ನಿಮ್ಮ ಶಾಶ್ವತ ನೆಲೆ ಕಟ್ಟಿಕೊಡಲು ಸರ್ಕಾರ ತಯಾರಿದ್ದು, ಆದರೆ ಗ್ರಾಮ ಸ್ಥಳಾಂತರಕ್ಕೆ ಜಮೀನು ಸಮಸ್ಯೆ ಉಂಟಾಗಿದೆ. ಯಾರಾದರೂ ಸರ್ಕಾರಿ ಬೆಲೆಯಲ್ಲಿ ಜಮೀನು ನೀಡಿದರೆ ಗ್ರಾಮ ಸ್ಥಳಾಂತರಕ್ಕೆ ನಾವು ಸಿದ್ಧ ಎನ್ನುತ್ತಾರೆ. ಬಂಗಾರ ಬೆಳೆಯುವ ಭೂಮಿಯನ್ನು ಸರ್ಕಾರಿ ಬೆಲೆಗೆ ಕೊಟ್ಟು ನೆರವಾಗಲು ಯಾವ ಜಮೀನ್ದಾರರು ಮುಂದೆ ಬರುತ್ತಿಲ್ಲ. ಇದೊಂದೇ ಕಾರಣದಿಂದ
ಮಾತ್ರ ಮಿರ್ಜಿ ಗ್ರಾಮದ ಶಾಶ್ವತ ಸ್ಥಳಾಂತರ ಮರೀಚಿಕೆಯಾಗಿಯೇ ಉಳಿದುಕೊಂಡಿದೆ.

ಪ್ರವಾಹ ಬಂದಾಗೊಮ್ಮೆ ಗ್ರಾಮಸ್ಥರಿಗೆ ಕಾಳಜಿ ಕೇಂದ್ರದ ಅನುಕೂಲ ಕಲ್ಪಿಸುವ ಜನಪ್ರತಿನಿ ಧಿಗಳು ಗ್ರಾಮಸ್ಥರ ಗೋಳು ಕಂಡು ಪರಿಹರಿಸಲಾಗದೆ ಕೈಕೈ ಹಿಸುಕಿ ಕೊಳ್ಳುವಂತಾಗಿದೆ.

ಫಲವತ್ತಾದ ಭೂಮಿ ಕೊಡಲು ನಕಾರ: ಮಿರ್ಜಿ ಗ್ರಾಮ ಘಟಪ್ರಭಾ ನದಿ ತಟದಲ್ಲಿ ನೆಲೆ ಯಾಗಿರುವ ಪ್ರದೇಶ ಇಲ್ಲಿನ ಮೆಕ್ಕಲು ಮಣ್ಣಿನ ಜಮೀನಿನಲ್ಲಿ ಬಂಗಾರ ಬೆಳೆಯುವ ಶಕ್ತಿ ಇದೆ. ಐದಾರು ವರ್ಷಕ್ಕೊಮ್ಮೆ ಬಂದು ಹೋಗುವ ಪ್ರವಾಹಕ್ಕಾಗಿ ಫಲವತ್ತಾದ ಭೂ ಪ್ರದೇಶ ಬಿಟ್ಟು ಕೊಡಲು ಯಾರೂ ಮುಂದಾಗುತ್ತಿಲ್ಲ. ಜನಪ್ರತಿನಿಧಿಗಳು ಸ್ಥಳಾಂತರವೆಂಬ ತುಪ್ಪ ಜನರ ಮೂಗಿಗೆ ಸವರಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವುದು ಸುಳ್ಳಲ್ಲ.

*ಗೋವಿಂದಪ್ಪ ತಳವಾರ

Advertisement
Advertisement

Udayavani is now on Telegram. Click here to join our channel and stay updated with the latest news.

Next