Advertisement

Mudhol: ಉದಯವಾಣಿ ಫಲಶೃತಿ; ಭವನ ಸ್ವಚ್ಛತೆಗೆ ಮುಂದಾದ ಅಧಿಕಾರಿಗಳು

02:25 PM Sep 26, 2024 | Team Udayavani |

ಮುಧೋಳ: ನಿರ್ವಹಣೆ ಕೊರತೆಯಿಂದ ಪಾಳು ಕಟ್ಟಡದಂತಾಗಿದ್ದ ವಾಲ್ಮೀಕಿ ಭವನ ಸ್ವಚ್ಛತೆಗೆ ಕೊನೆಗೂ ಅಧಿಕಾರಿಗಳು ಮುಂದಾಗಿದ್ದಾರೆ.

Advertisement

ಭವನದ ಸ್ಥಿತಿಗತಿ ಕುರಿತು ಸೆ.25ರಂದು ಉದಯವಾಣಿಯಲ್ಲಿ‌‌‌ ಸಮುದಾಯ ಭವನ ಅನೈತಿಕ‌ ಚಟುವಟಿಕೆಯ ತಾಣ ಎಂಬ ಶಿರ್ಷಿಕೆಯಡಿ ವಿಸ್ತೃತ ವರದಿ ಪ್ರಕಟಿಸಿತ್ತು.

ವರದಿಯಿಂದ ಎಚ್ಚೆತ್ತ ನಗರಸಭೆ ಅಧಿಕಾರಿಗಳು ಸೆ.25ರ ಬುಧವಾರ ಭವನ ಸ್ವಚ್ಛತಾ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.

ಹೆಚ್ಚಿನ‌ ಪ್ರಮಾಣದಲ್ಲಿ ಗಲೀಜಾಗಿರುವ ಭವನವನ್ನು ಸಂಪೂರ್ಣ ಸ್ವಚ್ಛಗೊಳಿಸಿ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಲಾಗುವುದು ಎಂದು ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ ಉದಯವಾಣಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next