Advertisement

ಸರ್ಕಾರಿ ಹಾಸ್ಟೇಲ್‌ಗೆ ವಲಸಿಗರು

05:55 PM Jun 04, 2020 | Naveen |

ಮುದ್ದೇಬಿಹಾಳ: ಢವಳಗಿ ಗ್ರಾಮದ ಹೊರ ವಲಯದಲ್ಲಿರುವ ಬಾಲಕಿಯರ ಸರ್ಕಾರಿ ವಸತಿ ನಿಲಯದ ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಕ್ಕೆ ಮಂಗಳವಾರ ದಿಢೀರ್‌ನೆ ಮಹಾರಾಷ್ಟ್ರದ ಮುಂಬೈನಿಂದ ಬಂದಿರುವ 18 ವಲಸಿಗರನ್ನು ತಂದಿರಿಸಿದ್ದಕ್ಕೆ ಗ್ರಾಮಸ್ಥರಿಂದ ಆಕ್ರೋಶ ವ್ಯಕ್ತವಾಗಿದೆ.

Advertisement

ಮುಂಬೈ-ಗದಗ ರೈಲು ಮೂಲಕ ವಿಜಯಪುರಕ್ಕೆ ಬಂದಿದ್ದ ಇವರನ್ನು ಜಿಲ್ಲಾಡಳಿತದ ಸೂಚನೆ ಮೇರೆಗೆ ಸಾರಿಗೆ ಸಂಸ್ಥೆ ಬಸ್‌ ಮೂಲಕ ವಸತಿ ನಿಲಯಕ್ಕೆ ಕರೆತಂದಿದ್ದು ಸರಿಯಲ್ಲ. ತಾಳಿಕೋಟೆ ಭಾಗದ 10, ಮಾವಿನಭಾವಿ, ಮಾದಿನಾಳದ ತಲಾ 4 ಜನರನ್ನು ಇಲ್ಲಿ ಇರಿಸಲಾಗಿದೆ. ಈ ಮೊದಲು ಇಲ್ಲಿ 197 ಜನರನ್ನು ಇರಿಸಲಾಗಿತ್ತು. ಅವರೆಲ್ಲರೂ ಕ್ವಾರಂಟೈನ್‌ ಅವಧಿ ಮುಗಿಸಿ ತಮ್ಮೂರುಗಳಿಗೆ ತೆರಳಿದ್ದಾರೆ. ಎಲ್ಲ ಮುಗಿದ ಮೇಲೆ ಅತಿ ಹೆಚ್ಚಿನ ಸೋಂಕು ಇರುವ ಮಹಾರಾಷ್ಟ್ರ ವಲಸಿಗರನ್ನು ಮತ್ತೇ ತಂದಿರಿಸಿದ್ದು ಸರಿಯಲ್ಲ, ನಮ್ಮ ಗ್ರಾಪಂ ವ್ಯಾಪ್ತಿ ಜನರನ್ನು ತಂದಿರಿಸಿದ್ದರೆ ಒಪ್ಪಿಕೊಳ್ಳಬಹುದಿತ್ತು. ಈಗ ಬೇರೆ ಬೇರೆ ಜನರನ್ನು ತಂದಿರಿಸುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತಾಗುವ ಸಂಭವ ಇದೆ ಎಂದು ಗ್ರಾಪಂ ಸದಸ್ಯ ಕುಮಾರೆಪ್ಪ ಕೋರಿ ಅಸಮಾಧಾನ ತೋಡಿಕೊಂಡಿದ್ದಾರೆ.

ಗೊಂದಲ: ವಸತಿ ನಿಲಯದಲ್ಲಿದ್ದ ಎಲ್ಲರೂ ಸಾಂಸ್ಥಿಕ ಕ್ವಾರಂಟೈನ್‌ ಅವಧಿ ಮುಗಿಸಿ ತಮ್ಮೂರಿಗೆ ತೆರಳಿದ್ದರಿಂದ ಕೇಂದ್ರದ ಉಸ್ತುವಾರಿ ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿತ್ತು. ಈಗ ದಿಢೀರ್‌ 18 ಜನರನ್ನು ತಂದಿರಿಸಿದ ಮಾಹಿತಿ ತಿಳಿದ ಅಧಿಕಾರಿಗಳು ಕೆಲ ಹೊತ್ತು ಗೊಂದಲಕ್ಕೀಡಾಗಿದ್ದರು. ನಂತರ ಪರಿಸ್ಥಿತಿ ಎದುರಿಸಲು ಸಜ್ಜಾದ ತಾಲೂಕಾಡಳಿತ ತರಾತುರಿಯಲ್ಲಿ ಬಿಇಒ ಅವರನ್ನು ಕೇಂದ್ರಕ್ಕೆ ಕಳಿಸಿ ಸಿಬ್ಬಂದಿಗೆ ಕರೆ ಮಾಡಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಿತು.

Advertisement

Udayavani is now on Telegram. Click here to join our channel and stay updated with the latest news.

Next