Advertisement

ಮುದ್ದೇಬಿಹಾಳ: ಸಕ್ಕರೆ ಕಾರ್ಖಾನೆಯ ಯೂಪಿ ಮೂಲಕ ಕಾರ್ಮಿಕ ಆತ್ಮಹತ್ಯೆ

09:57 PM May 12, 2023 | Team Udayavani |

ಮುದ್ದೇಬಿಹಾಳ: ತಾಲೂಕಿನ ಯರಗಲ್ಲ ಮದರಿ ಗ್ರಾಮದ ಹತ್ತಿರ ಇರುವ ಸಕ್ಕರೆ ಕಾರ್ಖಾನೆಯ ಲೇಬರ್ ಕ್ವಾಟ್ರಸ್‌ನಲ್ಲಿ ಉತ್ತರ ಪ್ರದೇಶ ಮೂಲದ ಕಾರ್ಮಿಕನೊಬ್ಬ ಗುರುವಾರ ತಡರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

Advertisement

ಮೃತನನ್ನು ಉತ್ತರ ಪ್ರದೇಶ ರಾಜ್ಯದ ಗಾಝಿಪುರ ಜಿಲ್ಲೆಯ ಮೋಹಂದಾಬಾದ್ ತಾಲೂಕು ಅಜಾನೆಪುರ ಗ್ರಾಮದ ನಿವಾಸಿ ದಿನೇಶ ಮಾರ್ಕಂಡೆ ಖುಶ್ವಾಹಾ (29) ಎಂದು ಗುರ್ತಿಸಲಾಗಿದೆ. ಈತ ಕಾರ್ಖಾನೆಯಲ್ಲಿ ಚೈನ್ ಡೋಜರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ.

ರಾತ್ರಿ ಸೋದರ ಸಂಬಂಧಿ ಪಪ್ಪು ಎಂಬಾತನೊಂದಿಗೆ ಕೊಠಡಿಯಲ್ಲಿ ಮಲಗಿದ್ದ. ಮಲಗುವುದಕ್ಕೂ ಮೊದಲು ಮನೆಯವರೊಂದಿಗೆ ಮೊಬೈಲ್‌ನಲ್ಲಿ ಜಗಳ ಮಾಡುತ್ತಿದ್ದ. ಬಹುಶ: ಕೌಟುಂಬಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸೈ ಆರೀಫ ಮುಷಾಪುರಿ ಸ್ಥಳಕ್ಕೆ ಭೇಟಿ ನೀಡಿ ಕಾನೂನು ಕ್ರಮ ಕೈಕೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next