Advertisement

ಕೆಸರು ರಸ್ತೆ; ಸಂಚಾರ ದುಸ್ತರ

10:17 AM Jul 21, 2022 | Team Udayavani |

ಸುಬ್ರಹ್ಮಣ್ಯ: ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಗ್ರಾಮೀಣ ಭಾಗದ ಮಣ್ಣಿನ ರಸ್ತೆಗಳು ಹದಗೆಟ್ಟಿವೆ. ಅದರಲ್ಲೂ ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯ ಹಲವೆಡೆ ರಸ್ತೆಗಳು ಸಂಚಾರಕ್ಕೆ ಸವಾಲೊಡ್ಡಿವೆ.

Advertisement

ನೂಜಿಬಾಳ್ತಿಲ ಗ್ರಾಮದ ಅರಿ ಮಜಲು-ಉದನೆ ಸಂಪರ್ಕಿ ಸುವ ರಸ್ತೆ ನಿಡ್ಡೋಬೈಲುವಿನಲ್ಲಿ ಸಂಪೂರ್ಣ ಕೆಸರಿನಿಂದ ಕೂಡಿದೆ. ಪಾದಚಾರಿಗಳು, ವಾಹನ ಸವಾರರು ಸಂಕಷ್ಟ ಅನುಭ ವಿಸುತ್ತಿದ್ದಾರೆ. ಅಡೆಂಜ ತೂಗುಸೇತುವೆ ಸಂಪರ್ಕ ರಸ್ತೆಯೂ ಹಾಳಾಗಿದ್ದು, ವಾಹನ ಸವಾರರು ಸಂಚರಿಸಲು ಹರ ಸಾಹಸವೇ ಪಡಬೇಕಿದೆ. ಪೇರಡ್ಕದಿಂದ ಬಾಂತಾಜೆ, ಓಟಿಮಾರು, ಗೌಡಿಗೆ ಸಂಪರ್ಕ ರಸ್ತೆಯೂ ತೀರಾ ಹದಗೆಟ್ಟಿದ್ದು, ಕೆಸರಿನಿಂದಾಗಿ ಸುಗಮ ಸಂಚಾರ ಮರೀಚಿಕೆಯಾಗಿದೆ.

ತುರ್ತು ಸಂದರ್ಭದಲ್ಲಂತೂ ಇಲ್ಲಿನ ಪಾಡು ಹೇಳತೀರದು. ಕುಬಲಾಡಿ- ಪಂಜಳ ರಸ್ತೆಯ ಪರಿಸ್ಥಿತಿಯೂ ಇದರಿಂದ ಭಿನ್ನವಾಗಿಲ್ಲ. ಬದಿ ಬಾಗಿಲು- ಒರುಂಬಾಳು ರಸ್ತೆಯ ಕೆಲವೆಡೆಯೂ ಹೀಗೆ ಇದೆ. ಅಧಿಕಾರಿಗಳು, ಜನಪ್ರತಿನಿಧಿಗಳು ‌ಮನ ಹರಿಸಿ ತುರ್ತಾಗಿ ದುರಸ್ತಿ ನಡೆಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಮಳೆಗಾಲದಲ್ಲಿ ಮಣ್ಣಿನ ರಸ್ತೆಗಳ ಸಂಚಾರಕ್ಕೆ ಸಮಸ್ಯೆಯಾಗುವುದು ಸಾಮಾನ್ಯವಾದರೂ ಈ ವರ್ಷ ತೀರಾ ಹದಗೆಟ್ಟಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next