Advertisement

ಕಡಲ್ಕೊರೆತ ಪ್ರದೇಶಕ್ಕೆ ಸಂಸದರ ಭೇಟಿ ಪರಿಹಾರ ಭರವಸೆ

07:47 PM Jun 14, 2019 | Sriram |

ಕುಂಬಳೆ: ಉಪ್ಪಳ ಬಳಿಯ ಮೂಸೋಡಿ ಆದಿಕ್ಕ ಎಂಬಲ್ಲಿ ಸಮುದ್ರ ಕೊರೆತದಿಂದ ಒಂದು ಮಸೀದಿ ಮತ್ತು 2 ಮನೆಗಳು ಕುಸಿದ 13 ಮನೆಗಳು ಅಪಾಯದಂಚಿನಲ್ಲಿರುವ ಪ್ರದೇಶಕ್ಕೆ ಕಾಸರಗೋಡು ಲೋಕಸಭಾ ಸದಸ್ಯ ರಾಜ್‌ಮೋಹನ್‌ ಉಣ್ಣಿತ್ತಾನ್‌ ಭೇಟಿ ನೀಡಿ ಪರಿಹಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Advertisement

ಸ್ಥಳೀಯ ಸಂತ್ರಸ್ತರು ಲೋಕಸಭಾ ಸದಸ್ಯರಿಗೆ ಮನವಿ ಸಲ್ಲಿಸಿ ಸಮುದ್ರ ಕೊರೆತಕ್ಕೆ ಶಾಶ್ವತ ಪರಿಹಾರ ಮಾಡಬೇಕೆಂದು ಒತ್ತಾಯಿಸಿದರು. ಐಕ್ಯರಂಗದ ನಾಯಕರಾದ ಎಂಸಿ.ಕಮರುದೀªನ್‌,ಟಿ.ಎ.ಮೂಸಾ,ಎಂ.ಬಿ.ಯೂಸುಫ್‌,ಗೋಲ್ಡನ್‌ ರಹಿಮಾನ್‌,ಬಿ.ಎಂ.ಯೂಸುಫ್‌ ಸಂಸದರ ಜೊತೆಯಲ್ಲಿದ್ದರು. ಈ ಪ್ರದೇಶದಲ್ಲಿ ಈಗಾಗಲೇ ಸುಮಾರು 40 ರಷ್ಟು ತೆಂಗಿನ ಮರಗಳ ಸಹಿತ ಸ್ಥಳೀಯ ನಿವಾಸಿಗಳ ಎಕ್ರೆಗಟ್ಟಲೆ ಸ್ಥಳವನ್ನು ಕಡಲು ನುಂಗಿದೆ.ಆದುರಿಂದ ಇವರಿಗೆ ಪರಿಹಾರ ನೀಡುವುದಲ್ಲದೆ ಬದಲಿ ವ್ಯವಸ್ಥೆ ಮಾಡಬೇಕೆಂಬುದಾಗಿ ಮನವಿಯಲ್ಲಿ ವಿನಂತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next