Advertisement

ಈಶ್ವರಪ್ಪನವರೇ ಬೆಂಕಿ ಹಚ್ಚುವ ಕೆಲಸ ಮಾಡ್ಬೇಡಿ;BSY ಪರ ಶ್ರೀರಾಮುಲು

04:26 PM Jan 19, 2017 | Team Udayavani |

ಬಳ್ಳಾರಿ:ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಹೋದರೆ ಮಾತ್ರ ಬಿಜೆಪಿಗೆ ರಾಜ್ಯದಲ್ಲಿ ಅಧಿಕಾರ ಸಿಗುತ್ತದೆ. ಹಾಗಾಗಿ ಈಶ್ವರಪ್ಪನವರೇ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ ಎಂದು ಮಾಜಿ ಸಚಿವ, ಸಂಸದ ಶ್ರೀರಾಮುಲು ತಿರುಗೇಟು ನೀಡಿದ್ದಾರೆ.

Advertisement

ಬಿಜೆಪಿಯಲ್ಲಿ ಹಿರಿಯ ಮುಖಂಡ ಕೆಎಸ್ ಈಶ್ವರಪ್ಪ ಹಾಗೂ ಬಿಎಸ್ ಯಡಿಯೂರಪ್ಪನವರ ನಡುವಿನ ಜಟಾಪಟಿ ಕುರಿತಂತೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಎಸ್ ವೈ ಅವರ ಕಾಲು ಎಳೆದ್ರೆ ಬಿಜೆಪಿಯಲ್ಲಿ ಸಮಸ್ಯೆ ಆಗುತ್ತದೆ. ನಾವೆಲ್ಲರೂ ಯಡಿಯೂರಪ್ಪನವರಿಗೆ ಬೆಂಬಲ ಕೊಡಬೇಕಾಗಿದೆ ಎಂದರು.

ಯಡಿಯೂರಪ್ಪನವರು ಮುಖ್ಯಮಂತ್ರಿ ಆದರೆ ಈಶ್ವರಪ್ಪನವರಿಗೂ ಅದರ ಲಾಭ ಸಿಗುತ್ತದೆ. ಆದರೆ ಶಿವಮೊಗ್ಗದ ಸಣ್ಣ ಜಗಳದ ಹಿನ್ನೆಲೆ ಇಟ್ಟುಕೊಂಡು ರಾಜ್ಯಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next