Advertisement

2 ಬಾಟಲಿ ಕುಡಿದರೂ…ಎಣ್ಣೆಯಲ್ಲಿ ಕಿಕ್‌ ಇಲ್ಲ ಎಂದು ಗೃಹ ಸಚಿವರಿಗೆ ದೂರು ನೀಡಿದ ಆಸಾಮಿ !

09:07 PM May 08, 2022 | Team Udayavani |

ಭೋಪಾಲ್‌: “ನಾ ಕುಡಿದ ಎಣ್ಣೆಯಿಂದ ಕಿಕ್‌ ಏರಲಿಲ್ಲ’ ಎಂದು ಕುಡುಕನೊಬ್ಬ ಗೃಹ ಸಚಿವರಿಗೇ ದೂರು ಬರೆದಿದ್ದಾನೆ!

Advertisement

ಹೌದು ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಬಹದ್ದೂರ್‌ಗಂಜ್‌ನ ನಿವಾಸಿ ಲೋಕೇಂದ್ರ ಸಥಿಯಾ ಏ.12ರಂದು ನಾಲ್ಕು ಕ್ವಾರ್ಟರ್‌ ಬಾಟಲಿಗಳನ್ನು ಖರೀದಿಸಿದ್ದಾನೆ. ಅದರಲ್ಲಿ 2 ಬಾಟಲಿ ಕುಡಿದರೂ ಅವನಿಗೆ ಚೂರೂ ಮತ್ತೇರಿಲ್ಲವಂತೆ. ಇದರಿಂದ ಕ್ರುದ್ಧನಾದ ಆತ ಗೃಹ ಸಚಿವ ನರೋತ್ತಮ ಮಿಶ್ರಾ ಅವರಿಗೆ ಪತ್ರ ಬರೆದಿದ್ದು, ಮದ್ಯವನ್ನು ಕಲಬೆರಕೆ ಮಾಡಲಾಗಿದೆ ಎಂದು ದೂರಿದ್ದಾನೆ.

ಹಾಗೆಯೇ ಅಬಕಾರಿ ಸಚಿವಾಲಯಕ್ಕೂ ಪತ್ರ ಬರೆದಿದ್ದು, ಪರಿಶೀಲನೆಗೆಂದು ತನ್ನ ಬಳಿಯಿದ್ದ 2 ಕ್ವಾರ್ಟರ್‌ ಬಾಟಲಿಗಳನ್ನೂ ಕಳುಹಿಸಿಕೊಟ್ಟಿದ್ದಾನೆ.

ಇದನ್ನೂ ಓದಿ : ಶಾಲೆಯ ಶುಲ್ಕ ಕಟ್ಟಿಲ್ಲವೆಂದು 35 ವಿದ್ಯಾರ್ಥಿಗಳನ್ನೇ ಒತ್ತೆ ಇರಿಸಿದ ಶಾಲಾ ಆಡಳಿತ ಮಂಡಳಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next