Advertisement

ಭುಗಿಲೆದ್ದ ಕೈ ಭಿನ್ನಮತ: ನಾಯಕರ ವಿರುದ್ಧ ಡಿ.ಕೆ.ಸುರೇಶ್‌ ಕಿಡಿ

04:20 PM Sep 20, 2017 | |

 ಬೆಂಗಳೂರು : ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ಕಾಂಗ್ರೆಸ್‌ ನಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಸಚಿವ ಡಿ.ಕೆ.ಶಿವಕುಮಾರ್‌ ಸಹೋದರ, ಸಂಸದ ಡಿ.ಕೆ.ಸುರೇಶ್‌ ಬುಧವಾರ ಸುದ್ದಿಗೋಷ್ಠಿ ನಡೆಸಿ ಪಕ್ಷದ ನಾಯಕರ ವಿರುದ್ಧವೇ ಕಿಡಿ ಕಾರಿದ್ದಾರೆ.

Advertisement

ಬಿಬಿಎಂಪಿ ಮೇಯರ್‌ ಆಯ್ಕೆ ವಿಚಾರಕ್ಕೆ ಸಂಬಂಧಿಸಿ ಪಕ್ಷದ ನಾಯಕರ ತೀರ್ಮಾನದ ವಿರುದ್ಧ ಬಹಿರಂಗ ಅಸಮಾಧಾನ ಹೊರ ಹಾಕಿದ ಸುರೇಶ್‌ ‘ಇದೇ 26 ರಂದು ಮೇಯರ್‌ ಚುನಾವಣೆ ನಡೆಯಲಿದ್ದು ಪ್ರಬಲ ಅಭ್ಯರ್ಥಿಗಳು ಮೇಯರ್‌ ಆಗುತ್ತಾರೆ. ಆದರೆ ನಮ್ಮ ಕ್ಷೇತ್ರದ ವ್ಯಾಪ್ತಿಯ ಕೆಲ ಕ್ಷೇತ್ರಗಳ ಅಭಿವೃದ್ಧಿಯೇ ಆಗಿಲ್ಲ, ಸರ್ಕಾರ ಮತ್ತು ಎಲ್ಲಾ ಮೇಯರ್‌ಗಳು ಈ ಕ್ಷೇತ್ರಗಳನ್ನು ಮರೆತಿದ್ದಾರೆ. ನಮ್ಮ ಕ್ಷೇತ್ರ ವಾಪ್ತಿಯ ಪರಿಶಿಷ್ಟ ಜಾತಿಗೆ ಸೇರಿರುವ ವೇಲು ನಾಯಕ್ ಮತ್ತು ಅಂಜನಪ್ಪ ಇಬ್ಬರ ಪೈಕಿ ಒಬ್ಬರಿಗೆ ಮೇಯರ್‌ ಸ್ಥಾನ ನೀಡಬೇಕು.ಈ ಬಗ್ಗೆ ಸಿಎಂ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಿಗೆ ಮನವಿ ಮಾಡುತ್ತೇನೆ’ ಎಂದರು. 

ಮೇಯರ್‌ ಚುನಾವಣೆ ಗೆ ಸಂಬಂಧಿಸಿ ನಮಗೆ ಜವಾಬ್ದಾರಿ ನೀಡಿದರೆ ಜೆಡಿಎಸ್‌ ನಾಯಕರೊಂದಿಗೆ ನಾವೇ ಮಾತುಕತೆ ನಡೆಸುವುದಾಗಿ ಅಸಮಾಧಾನ ಹೊರಹಾಕಿದರು. 

‘ಅತ್ತರೆ ಮಾತ್ರ ಹಾಲು ಕೊಡುವುದು ಅಂದಂಗೆ, ನಾವಾಗೇ ಕೇಳದಿದ್ದರೆ ನಮ್ಮನ್ನು ಗಮನಿಸುವುದೇ ಇಲ್ಲ, ನಮ್ಮ ಸಹನೆಯ ಕಟ್ಟೆ ಒಡೆಯುತ್ತದೆ, ಎಂದು ಕಿಡಿ ಕಾರಿದರು. 

ಸುರೇಶ್‌ ಬೇಡಿಕೆಗೆ ಶಾಸಕ ಮುನಿರತ್ನ ಬೆಂಬಲವನ್ನೂ ಸೂಚಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next