Advertisement

Forest: ಹುಲಿ ಉಗುರು ಹೊಂದಿರುವ ಇನ್ನಷ್ಟು ಮಂದಿಗೆ ಕಾದಿದೆ ಸಂಕಷ್ಟ

09:44 PM Oct 28, 2023 | Team Udayavani |

ಬೆಂಗಳೂರು: ರಾಜ್ಯ ಮಟ್ಟದಲ್ಲಿ ಭಾರೀ ಸದ್ದು ಮಾಡಿದ್ದ ಹುಲಿ ಉಗುರು ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಹಲವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಕಣ್ಣಿಟ್ಟಿದ್ದು, ಗೌಪ್ಯವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

Advertisement

ಹುಲಿ ಉಗುರು, ಜಿಂಕೆ ಚರ್ಮ, ಹುಲಿ ಚರ್ಮ ಮುಂತಾದ ವನ್ಯಜೀವಿ ಉತ್ಪನ್ನಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿರುವವರ ಮೇಲೆ ಅರಣ್ಯ ಅಧಿಕಾರಿಗಳ ಸಮರ ಮತ್ತೆ ಮುಂದುವರಿದಿದೆ. ಶೀಘ್ರದಲ್ಲೇ ಇನ್ನಷ್ಟು ದಾಳಿ ನಡೆಸಿ ಅಡಗಿಸಿಟ್ಟಿರುವ ಉತ್ಪನ್ನ ಜಪ್ತಿ ಮಾಡಿಕೊಳ್ಳಲು ಸದ್ದಿಲ್ಲದೆ ಸಿದ್ಧತೆ ನಡೆಯುತ್ತಿದೆ. ಇನ್ನೂ ಹಲವಾರು ಮಂದಿ ಹುಲಿ ಉಗುರು ಮಾದರಿಯ ಲಾಕೆಟ್‌ ಧರಿಸಿರುವುದು ಅರಣ್ಯ ಅಧಿಕಾರಿಗಳ ಗಮನಕ್ಕೆ ಬಂದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ವರ್ತೂರು ಸಂತೋಷ್‌ ಬಂಧನದ ಬಳಿಕ ಹುಲಿ ಉಗುರು ಧರಿಸಿದ್ದ ಹಲವಾರು ಸೆಲೆಬ್ರೆಟಿಗಳು, ಉದ್ಯಮಿಗಳ ಮನೆ ಶೋಧ ನಡೆಸಿ ಪರಿಶೀಲಿಸಲಾಗಿತ್ತು. ಆದರೆ ವನ್ಯ ಜೀವಿ ಉತ್ಪನ್ನ ಪತ್ತೆಯಾಗದ ಹಿನ್ನೆಲೆಯಲ್ಲಿ ಬರಿಗೈಯಲ್ಲಿ ಮರಳಿದ್ದರು. ಈಗ ಸಮಯ ಸಂದರ್ಭ ನೋಡಿಕೊಂಡು ವಿವಿಧ ಕಡೆ ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next