Advertisement

ಮಂಗಳೂರು ಕೆಎಸ್‌ ಆರ್‌ ಟಿಸಿಗೆ 1 ಕೋಟಿ ನಷ್ಟ: ಇಂದಿನಿಂದ ಮಂಗಳೂರು- ಪುಣೆ ಬಸ್‌ ಪುನರಾರಂಭ

09:46 AM Aug 14, 2019 | keerthan |

ಸುರತ್ಕಲ್:‌ ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರವಾಹದ ಕಾರಣದಿಂದ ರದ್ದಾಗಿದ್ದ ಮಂಗಳೂರು- ಪುಣೆ ಕೆಎಸ್‌ ಆರ್‌ ಟಿಸಿ ಬಸ್‌ ಸಂಚಾರ ಮಂಗಳವಾರದಿಂದ ಪುನರಾರಂಭವಾಗಲಿದೆ ಎಂದು ಕೆಎಸ್‌ ಆರ್‌ ಟಿಸಿ ಮಂಗಳೂರು ವಿಭಾಗ ಜಿಲ್ಲಾ ನಿಯಂತ್ರಣಾಧಿಕಾರಿ ಅಶ್ರಫ್‌ ಅವರು ಹೇಳಿದ್ದಾರೆ.

Advertisement

ಮಂಗಳೂರು, ಉಡುಪಿ, ಕುಂದಾಪುರ ವಿಭಾಗದಿಂದ ಮಹಾರಾಷ್ಟ್ರದ ಮುಂಬೈ, ಪುಣೆ, ಕೊಲ್ಲಾಪುರಕ್ಕೆ ಬಸ್‌ ಸಂಚಾರವಿದ್ದು, ಪ್ರವಾಹದ ಕಾರಣದಿಂದ ಇದನ್ನು ಕೆಲ ದಿನಗಳ ಮಟ್ಟಿಗೆ ರದ್ದು ಮಾಡಲಾಗಿತ್ತು. ಆದರೆ ಈಗ ಪುಣೆಗೆ ಸುಗಮ ಸಂಚಾರಕ್ಕೆ ಅನುಮತಿ ದೊರೆತ ಕಾರಣ ಇಂದಿನಿಂದ ಬಸ್‌ ಸಂಚಾರ ಆರಂಭವಾಗಲಿದೆ. ಆದರೆ ಮುಂಬೈ ಮತ್ತು ಕೊಲ್ಲಾಪುರಕ್ಕೆ ಬಸ್‌ ಪುನರಾರಂಭಿಸುವ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದರು.

ಮಂಗಳೂರು ವಿಭಾಗಕ್ಕೆ ಒಂದು ಕೋಟಿ ನಷ್ಟ: ಕರಾವಳಿ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಸುರಿದ ಧಾರಕಾರ ಮಳೆ ಮತ್ತು ಘಟ್ಟ ಪ್ರದೇಶಗಳ ಗುಡ್ಡ ಕುಸಿತದಿಂದಾಗಿ ಕೆಎಸ್‌ ಆರ್‌ ಟಿಸಿ ಗೆ ಹಲವು ನಷ್ಟವಾಗಿದೆ. ಶಿರಾಡಿ, ಚಾರ್ಮಾಡಿ ಘಾಟಿ ಬಂದ್‌ ಆಗಿದ್ದ ಕಾರಣ ಸುಮಾರು 265 ಶೆಡ್ಯೂಲ್‌ ಗಳನ್ನು ರದ್ದುಗೊಳಸಿಲಾಗಿದೆ. ಇದರಿಂದಾಗಿ ಮಂಗಳೂರು ವಿಭಾಗಕ್ಕೆ ಒಂದು ಕೋಟಿಗೂ ಹೆಚ್ಚಿನ ನಷ್ಟವಾಗಿದೆ ಎಂದು ಜಿಲ್ಲಾ ನಿಯಂತ್ರಣಾಧಿಕಾರಿ ಅಶ್ರಫ್‌ ಅವರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next