Advertisement
ಅವರು ಸೋಮವಾರ ರಾಜಭವನದಲ್ಲಿ ಆಯೋಜಿಸಿದ್ದ ಟೋಕಿಯೊ ಒಲಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ನಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ಮತ್ತು ತರಬೇತುದಾರರಿಗೆ ಗೌರವಧನ ವಿತರಿಸಿ ಮಾತನಾಡಿದರು.
Related Articles
Advertisement
ಕನ್ನಡಿಗರಾದ ಸುಹಾಸ್ ಬ್ಯಾಡ್ಮಿಂಟನ್ ನಲ್ಲಿ ಬೆಳ್ಳಿ ಗಳಿಸಿದ್ದಾರೆ. ಕಠಿಣ ಪರಿಸ್ಥಿತಿಯನ್ನು ಸ್ಫೂರ್ತಿದಾಯಕ ವಾಗಿಸಿಕೊಳ್ಳವುದನ್ನು ಅವರಿಂದ ಕಲಿಯಬೇಕು ಎಂದರು. ಅದಿತಿ ಅಶೋಕ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡುತ್ತಿರುವುದು ನಮ್ಮ ಹೆಮ್ಮೆಎಂದು ಅವರು ಹೇಳಿದರು.
ಒಲಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಅದಿತಿ ಅಶೋಕ್, ಸುಹಾಸ್, ಉತ್ತಪ್ಪ, ಕೆ.ಸಿ. ಗಣಪತಿ, ಸುಬೇದಾರ್ ಕುಟ್ಟಪ್ಪ ಅವರನ್ನು ಸನ್ಮಾನಿಸಿ ನಗದು ಪುರಸ್ಕಾರ ನೀಡಲಾಯಿತು.
ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್, ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಉಪಸ್ಥಿತರಿದ್ದರು.