Advertisement

ಚೀನದಲ್ಲಿ ಮತ್ತೂ ಹೆಚ್ಚಿನ ಭ್ರಷ್ಟಾಚಾರ: ಸಂತೋಷ್‌ ಹೆಗ್ಡೆ

12:20 AM Sep 14, 2022 | Team Udayavani |

ಸಾಗರ: ನಮ್ಮ ದೇಶದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಆದರೆ ಇದಕ್ಕಿಂತ ಚೀನದಲ್ಲಿ ಭ್ರಷ್ಟಾಚಾರ ಮತ್ತೂ ಹೆಚ್ಚಿದೆ ಎಂದು ಸುಪ್ರೀಂಕೋರ್ಟ್‌ ನ್ಯಾಯಾಧಿಧೀಶರಾಗಿ ಹಾಗೂ ಲೋಕಾಯುಕ್ತರಾಗಿ ನಿವೃತ್ತ ರಾಗಿದ್ದ ಎನ್‌. ಸಂತೋಷ್‌ ಹೆಗ್ಡೆ ಹೇಳಿದ್ದಾರೆ.

Advertisement

ದೇಶಿ ಸೇವಾ ಪ್ರತಿಷ್ಠಾನ ಸ್ವಾತಂತ್ರ್ಯ ಅಮೃತೋತ್ಸವದ ಅಂಗವಾಗಿ ಮಂಗಳವಾರ ಗಾಂಧಿ ಮೈದಾನ ಸಭಾಂಗಣದಲ್ಲಿ ಪ್ರಬಂಧ ಸ್ಪರ್ಧೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಆಕಾಂಕ್ಷೆ ಇರಬೇಕು. ಆದರೆ ತೃಪ್ತಿ ಎನ್ನುವುದು ಅತೀ ಮುಖ್ಯ.

ನಮ್ಮ ಪಾಲಿಗೆ ಬಂದಿರುವುದರಲ್ಲಿಯೇ ತೃಪ್ತಿ ಹೊಂದುವ ಮನಃಸ್ಥಿತಿ ಪ್ರತಿಯೊಬ್ಬರಲ್ಲೂ ರೂಢಿಯಾದರೆ ಮಾತ್ರ ಈ ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಕ್ಕೆ ಸಾಧ್ಯ ಎಂದರು. ಹಿರಿಯ ಸಾಹಿತಿ ನಾ. ಡಿಸೋಜಾ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next