Advertisement

ಮೊರ್ಬಿ ಸೇತುವೆ ದುರಂತ; ಇದು ಜವಾಬ್ದಾರಿ ಹೊತ್ತವರ ನಿರ್ಲಕ್ಷ್ಯ: ಸಿ.ಟಿ. ರವಿ

03:15 PM Nov 01, 2022 | Team Udayavani |

ಚಿಕ್ಕಮಗಳೂರು: ಸೇತುವೆ ದುರಂತಕ್ಕೆ ತಾಂತ್ರಿಕ ಕಾರಣ ಮಾತ್ರವಲ್ಲ, ಜವಾಬ್ದಾರಿ ಇರುವವರು ಕೂಡ ಇದಕ್ಕೆ ಹೊಣೆಗಾರರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಗುಜರಾತಿನ ಮೊರ್ಬಿ ಸೇತುವೆ ದುರಂತಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ಸೇತುವೆ ಸಾಮರ್ಥ್ಯವೇ 100 ಜನ ಇರುವುದಾಗಿದ್ದು, 500 ಜನರನ್ನು ಸೇತುವೆ ಮೇಲ್ಭಾಗದಲ್ಲಿ ಬಿಟ್ಟಿರುವುದೇ ಅಪರಾಧ ಎಂದರು.

ಇದು ಜವಾಬ್ದಾರಿ ಹೊತ್ತವರ ದಿವ್ಯ ನಿರ್ಲಕ್ಷ್ಯವಾಗಿದ್ದು, ಈ ಕುರಿತು ಸಮಗ್ರ ತನಿಖೆಯಾಗಬೇಕು, ತಪ್ಪಸ್ಥಿತರ ವಿರುದ್ದ ಕ್ರಮಯಾಗಬೇಕು ಎಂದ ಅವರು ಘಟನೆ ನಡೆದ ಬಳಿಕ ಸಾಂತ್ವಾನ ಹೇಳುವುದಕ್ಕಿಂತ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next