Advertisement

ಮೂಡುಬಿದಿರೆ: ವಿದ್ಯುತ್ ಕಂಬಕ್ಕೆ ಗುದ್ದಿದ ಕಾರು, ಪವಾಡಸದೃಶವಾಗಿ ಪಾರಾದ ಪ್ರಯಾಣಿಕರು

08:51 PM Nov 13, 2022 | Team Udayavani |

ಮೂಡುಬಿದಿರೆ: ಶ್ರೀ ಕ್ಷೇ ತ್ರ ಧರ್ಮಸ್ಥಳ ಯಾತ್ರೆ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ವಿದ್ಯುತ್ ಕಂಬಕ್ಕೆ ಗುದ್ದಿದ ಘಟನೆ ಮಾರೂರಿನಲ್ಲಿ ರವಿವಾರ ಅಪರಾಹ್ನ 2 ಗಂಟೆ ಸುಮಾರಿಗೆ ಸಂಭವಿಸಿದೆ.

Advertisement

ವೇಗವಾಗಿ ಬಂದ ಕಾರು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ ಪರಿಣಾಮ ವಿದ್ಯುತ್ ಕಂಬ ಮುರಿದು ಕಾರಿನ ಮೇಲೆ ಬಿದ್ದಿದೆ. ಆ ಹೊತ್ತಿಗೆ
ವಿದ್ಯುತ್ ಪ್ರವಾಹವಿದ್ದರೂ ಪವಾಡ ಸದೃಶ ರೀತಿಯಲ್ಲಿ ಕಾರಿನಲ್ಲಿದ್ದ ನಾಲ್ವರೂ ಜೀವಾಪಾಯದಿಂದ ಪಾರಾಗಿದ್ದಾರೆ.

ಘಟನೆಗೆ ಚಾಲಕ ಅತೀ ವೇಗದಿಂದ ಚಾಲನೆ ಮಾಡುತ್ತಿದ್ದ ಸಂದರ್ಭ ನಿದ್ದೆಯ ಮಂಪರಿಗೆ ಜಾರಿದ್ದೇ ಅವಘಡಕ್ಕೆ ಕಾರಣ ಎಂದು ತಿಳಿದು ಬಂದಿದೆ.‌
ಕಾರಿನಲ್ಲಿದ್ದವರು ಮಂಗಳೂರು ಮೂಲದ ಕುಟುಂಬದವರು.

ಇದನ್ನೂ ಓದಿ :ಮಹಾಲಿಂಗಪುರ: ನಾಳೆಯಿಂದ ನವೆಂಬರ್ 17 ರವರೆಗೆ ಗಂಧದಗುಡಿ ಚಿತ್ರದ ಉಚಿತ ಪ್ರದರ್ಶನ

Advertisement

Udayavani is now on Telegram. Click here to join our channel and stay updated with the latest news.

Next