Advertisement

ಮೂಡುಶೆಡ್ಡೆ: ಬಾರ್‌ ಬಳಿ ಹಲ್ಲೆ

09:47 PM Mar 28, 2023 | Team Udayavani |

ಮಂಗಳೂರು: ಮೂಡುಶೆಡ್ಡೆಯ ಬಾರ್‌ವೊಂದರ ಬಳಿ ಗಲಾಟೆ ನಡೆದು ವ್ಯಕ್ತಿಯೋರ್ವರಿಗೆ ಕಲ್ಲಿನಿಂದ ಹಲ್ಲೆ ನಡೆಸಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

Advertisement

ಸೋಮವಾರ ರಾತ್ರಿ 9.30ಕ್ಕೆ ಸುರೇಶ್‌ ಎಂಬವರು ಬಾರ್‌ನಲ್ಲಿ ಮದ್ಯ ಸೇವಿಸುತ್ತ ವೇಟರ್‌ ಬಳಿ ಮಾತನಾಡುತ್ತಿದ್ದರು. ಅವರ ಎದುರು ಕುಳಿತಿದ್ದ ಇಬ್ಬರು ಅಪರಿಚಿತ ಯುವಕರು ಅದಕ್ಕೆ ಆಕ್ಷೇಪಿಸಿದರು. ಸುರೇಶ್‌ “ನಾನು ಕೂಡ ಬಾರಿಗೆ ಕುಡಿಯಲು ಬಂದಿದ್ದು” ಎಂದು ಉತ್ತರಿಸಿ ಬಾರ್‌ನಿಂದ ಹೊರಗೆ ಬರುವಾಗ ಅಪರಿಚಿತ ಯುವಕರು ಅವರನ್ನು ಹಿಂಬಾಲಿಸಿದರು. ಆಗ ಸುರೇಶ್‌ ಇಬ್ಬರಿಗೂ ಕೈಯಿಂದ ಹೊಡೆದರು. ಆಗ ಆ ಯುವಕರು ಸುರೇಶ್‌ ಅವರನ್ನು ರಸ್ತೆಗೆ ದೂಡಿ ಕಲ್ಲಿನಿಂದ ಮುಖಕ್ಕೆ ಹೊಡೆದು ಹೋಗಿದ್ದಾರೆ ಎಂದು ಕಾವೂರು ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next