Advertisement

ಮೂಡುಬಿದಿರೆ: ಅಕ್ಕನ ಗಂಡನಿಂದಲೇ ಕೊಲೆ

01:28 PM May 11, 2023 | Team Udayavani |

ಮೂಡುಬಿದಿರೆ: ಅಕ್ಕನ ಗಂಡನೇ ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ಮೇ. 11 ರ ಗುರುವಾರ ಬೆಳಗ್ಗೆ ಪುರಸಭಾ ವ್ಯಾಪ್ತಿಯ ಗಂಟಾಲ್ಕಟ್ಟೆಯಲ್ಲಿ ಸಂಭವಿಸಿದೆ.

Advertisement

ಗಂಟಾಲ್ಕಟ್ಟೆ ನಿವಾಸಿ ಮಹಮ್ಮದ್ ಜಮಾಲ್ (40) ಮೃತಪಟ್ಟ ವ್ಯಕ್ತಿಯಾಗಿದ್ದು, ಕೊಲೆ ಮಾಡಿದ ಆರೋಪಿ ಸುಹೈಬ್ ನನ್ನು ಬಂಧಿಸಲಾಗಿದೆ.

ಮಹಮ್ಮದ್ ಜಮಾಲ್ ಅವರ ಅಕ್ಕನ ಗಂಡ ಮಹಮ್ಮದ್ ಸುಹೈಬ್ ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದ್ದು, ಕಾರಣ ತಿಳಿದು ಬಂದಿಲ್ಲ.

ಮೂಲತ: ಚಿಕ್ಕಮಗಳೂರಿನವನಾದ ಸುಹೈಬ್ ಗಂಟಾಲ್ಕಟ್ಟೆಯಲ್ಲಿ ಜಮಾಲ್ ಮನೆಯ ಹತ್ತಿರವೇ ವಾಸವಾಗಿದ್ದು ಕ್ಷುಲ್ಲಕ ಕಾರಣದಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ.

ಮೂಡುಬಿದಿರೆ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಶವ ಪರೀಕ್ಷೆ ನಡೆದಿದೆ.

Advertisement

ಮೂಡುಬಿದಿರೆ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next