Advertisement

Moodabidri: ನೇಣು ಬಿಗಿದು ವೆಲ್ಡರ್‌ ಆತ್ಮಹತ್ಯೆ

12:26 AM Feb 21, 2024 | Team Udayavani |

ಮೂಡುಬಿದಿರೆ: ಬನ್ನಡ್ಕದ ಖಾಸಗಿ ಸಂಸ್ಥೆಯಲ್ಲಿ ವೆಲ್ಡರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಗದಗ ಮೂಲದ ಅರುಣ್‌ ಕುಮಾರ್‌ (29) ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Advertisement

ಆನಂದ್‌ ಅವರ ಪುತ್ರ ಅರುಣ್‌ ಶನಿವಾರ ರಾತ್ರಿಯಿಂದ ರವಿವಾರ ಬೆಳಗಿನವರೆಗೆ ಮೊಬೈಲ್‌ ಕರೆಯನ್ನು ಸ್ವೀಕರಿಸದ ಹಿನ್ನೆಲೆಯಲ್ಲಿ ಹೆತ್ತವರು ಅರುಣ್‌ ಅವರ ಸ್ನೇಹಿತನ ಮೊಬೈಲ್‌ಗೆ ಕರೆ ಮಾಡಿ ವಿಚಾರಿಸಿದರು. ಆತ ಆಲಂಗಾರಿನಲ್ಲಿರುವ ಬಾಡಿಗೆ ಮನೆಗೆ ಬಂದು ನೋಡಿದಾಗ ಆತ್ಯಹತ್ಯೆ ಮಾಡಿ ಕೊಂಡಿರುವುದು ಕಂಡುಬಂದಿತು.

ಆತ್ಯಹತ್ಯೆ ಮಾಡಿಕೊಂಡಿರುವ ಅರುಣ್‌ಗೆ ಮದುವೆ ನಿಶ್ಚಯವಾಗಿತ್ತೆನ್ನಲಾಗಿದೆ. ಆತ್ಯಹತ್ಯೆಗೆ ಕಾರಣ ತಿಳಿದುಬಂದಿಲ್ಲ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next